masthmagaa.com:
ಮಹಾರಾಷ್ಟರದಲ್ಲಂತೂ ಪರಿಸ್ಥಿತಿ ಕೈಮೀರಿ ಹೋಗ್ತಾ ಇದೆ. ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರ ಒಂದರಲ್ಲೇ 55 ಸಾವಿರಕ್ಕೂ ಅಧಿಕ ಜನರಿಗೆ ಕೊರೋನಾ ಸೋಂಕು ತಗುಲಿದೆ. ಹೀಗಾಗಿ ನಿನ್ನೆ ಸರ್ವಪಕ್ಷ ಸಭೆ ಕರೆದಿದ್ದ ಸಿಎಂ ಉದ್ಧವ್ ಠಾಕ್ರೆ ನಾಳೆ ಅಥವಾ ನಾಡಿದ್ದಿನಿಂದ 15 ದಿನಗಳ ಕಾಲ ಕಂಪ್ಲೀಟ್ ಲಾಕ್ಡೌನ್ ಹೇರುವ ಸುಳಿವು ಕೊಟ್ಟಿದ್ದಾರೆ. ಸರ್ವಪಕ್ಷ ಸಭೆ ನಡೆಸಿದ ಅವರು, ಲಾಕ್ಡೌನ್ ಬಗ್ಗೆ ಇಂದು ನಿರ್ಧಾರ ತೆಗೆದುಕೊಳ್ಳದೇ ಇದ್ರೂ, ಮುಂದೆ ಲಾಕ್ಡೌನ್ ಪರಿಸ್ಥಿತಿ ನಿರ್ಮಾಣವಾಗುತ್ತೆ. ಈ ವೇಳೆ ನಾವೆಲ್ಲರೂ ಕೊರೋನಾ ವಿರುದ್ಧ ಹೋರಾಡಲು ಗಟ್ಟಿತನ ತೋರಿಸಬೇಕಾಗುತ್ತೆ ಅಂತ ಹೇಳಿದ್ದಾರೆ. ಈ ವೇಳೆ ಬಿಜೆಪಿ ಕೂಡಾ ಲಾಕ್ಡೌನ್ ಹೇರೋದು ಬೇಡ ಅಂತ ನಾವು ಹೇಳಲ್ಲ.. ಈಗಾಗಲೇ ಲಾಕ್ಡೌನ್ನಿಂದ ಜನರಿಗೆ ಸಾಕಷ್ಟು ತೊಂದ್ರೆಯಾಗಿದೆ. ಹೀಗಾಗಿ ಸರಿಯಾದ ರೀತಿಯಲ್ಲಿ ಪ್ಲಾನ್ ಮಾಡ್ಕೊಂಡು ಮುಂದಿನ ಹೆಜ್ಜೆ ಇಡಿ ಅಂತ ಹೇಳಿದೆ. ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್ಡೌನ್ ಆಗುತ್ತಾ..? ಅಥವಾ ಹೆಚ್ಚು ಸೋಂಕು ಹರಡುತ್ತಿರುವ ಮುಂಬೈ ಮಾತ್ರ ಲಾಕ್ಡೌನ್ ಮಾಡ್ತಾರಾ ಕಾದು ನೋಡ್ಬೇಕು.
-masthmagaa.com
Contact Us for Advertisement