masthmagaa.com:
ಜಮ್ಮು- ಕಾಶ್ಮೀರದ ಶ್ರೀನಗರದಲ್ಲಿ ನಡೆಯುತ್ತಿರುವ ಜಿ20 ರಾಷ್ಟ್ರಗಳ ವರ್ಕಿಂಗ್ ಗ್ರೂಪ್ ಸಭೆಯಲ್ಲಿ ಚೀನಾ ಭಾಗವಹಿಸಿಲ್ಲ. ಸಭೆಗೆ ಗೈರು ಹಾಜರಾಗೋದ್ರಿಂದ ಚೀನಾಗೆ ನಷ್ಟ ಹೊರತು, ಭಾರತಕ್ಕಲ್ಲ ಅಂತ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಚೀನಾ ಬಿಟ್ಟು ಜಿ20 ಗುಂಪಿನ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಪ್ರವಾಸೋದ್ಯಮ ಕುರಿತು ನಡೆಯುತ್ತಿರುವ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಹೀಗಾಗಿ ಚೀನಾ ಬರದೇ ಇರೋದ್ರಿಂದ ಅಂತಹ ಮಹತ್ವದ ಪರಿಣಾಮ ಏನು ಆಗಲ್ಲ ಅಂತ ಸಿಂಗ್ ಹೇಳಿದ್ದಾರೆ. ಇದೇ ವೇಳೆ ಆರ್ಥಿಕತೆ ಹಾಗೂ ಪರಿಸರ ವಿಚಾರದಲ್ಲಿ ಜಾಗತಿಕವಾಗಿ ರೆಸ್ಪಾನ್ಸಿಬಿಲಿಟಿ ತೆಗೆದುಕೊಳ್ಳೋಕೆ ಭಾರತ ಸಿದ್ಧವಾಗಿದೆ ಅಂತ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
-masthmagaa.com
Contact Us for Advertisement