ದೆಹಲಿ: ಭಾನುವಾರ ಸಂಜೆ ದೆಹಲಿಯ ಹಲವು ಪ್ರದೇಶಗಳಲ್ಲಿ ಹಿಂಸಾಚಾರ ನಡೆಯುತ್ತಿದೆ ಅಂತ ವದಂತಿ ಹಬ್ಬಿಸಲಾಗಿದೆ. ಪಶ್ಚಿಮ ದೆಹಲಿಯ 12 ಪೊಲೀಸ್ ಠಾಣೆಗಳಿಗೆ ಹಿಂಸಾಚಾರ ನಡೆಯುತ್ತಿದೆ ಅಂತ ಜನ ಕರೆ ಮಾಡಿದ್ದಾರೆ. ಸಂಜೆ 7ರಿಂದ ಮಧ್ಯರಾತ್ರಿವರೆಗೆ ಸುಮಾರು 481 ಕರೆಗಳು ಬಂದಿವೆ. ತಿಲಕ್ ನಗರದಿಂದ 148, ಖಯಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 143 ಕರೆಗಳು ಬಂದಿವೆ. ಇನ್ನು ರಜೌರಿ ಗಾರ್ಡನ್(96), ಪಂಜಾಬಿ ಬಾಗ್(26), ಹರಿ ನಗರ(24), ಮೋತಿ ನಗರ(17), ಜನಕಪುರಿ(11) ಕರೆಗಳು ಬಂದಿವೆ. ಕರೆ ಮಾಡಿದ ದುಷ್ಕರ್ಮಿಗಳು ತಮ್ಮ ಏರಿಯಾದಲ್ಲಿ ಹಿಂಸಾಚಾರ ನಡೆಯುತ್ತಿದೆ ಅಂತ ಸುಳ್ಳು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಎಲ್ಲಾ ಕರೆಗಳು ಬೋಗಸ್ ಆಗಿವೆ. ಎಲ್ಲಾ ಪ್ರದೇಶದಲ್ಲಿ ಪರಿಸ್ಥಿತಿ ಸಹಜವಾಗಿದೆ. ನಾವು ಹಲವು ಕರೆಗಳನ್ನು ಸ್ವೀಕರಿಸಿದ್ದೇವೆ. ಆದ್ರೆ ಎಲ್ಲಾ ಕರೆಗಳು ಸುಳ್ಳು ವದಂತಿ ಎಂದು ತಿಳಿದುಬಂದಿದ್ದು, ಅದನ್ನು ಪರಿಶೀಲನೆಗೆ ಕಳುಹಿಸಿದ್ದೇವೆ. ನಾವು ಪ್ರದೇಶಗಳನ್ನು ಪರಿಶೀಲನೆ ನಡೆಸ್ತಿದ್ದು, ಜನರೊಂದಿಗೆ ಮಾತನಾಡುತ್ತಿದ್ದೇವೆ ಅಂತ ಹೇಳಿದ್ಧಾರೆ. ಅಲ್ಲದೆ ಈ ಪ್ರದೇಶಗಳಲ್ಲಿ ಪೊಲೀಸರು ಫ್ಲಾಗ್ ಮಾರ್ಚ್ ಮಾಡಿ, ಶಾಂತಿಗೆ ಮನವಿ ಮಾಡಿದ್ದಾರೆ.
Contact Us for Advertisement