masthmagaa.com:
ದೆಹಲಿ ಹಿಂಸಾಚಾರ ಕೇಸ್ನ ಎಫ್ಐಆರ್ನಲ್ಲಿ ಹೆಸರಿಸಲಾಗಿದ್ದ ಐವರು ಆರೋಪಿಗಳಿಗೆ ಕೋರ್ಟ್ ಜಾಮೀನು ನೀಡಿದೆ. ಹಿಂಸಾಚಾರದ ವೇಳೆ ರತನ್ ಲಾಲ್ ಅನ್ನೋ ಹೆಡ್ ಕಾನ್ಸ್ಟೇಬಲ್ ಹತ್ಯೆ ಮತ್ತು ಡಿಸಿಪಿ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿತ್ತು. ತುಂಬಾ ಸಮಯದಿಂದ ಜೈಲಿನಲ್ಲೇ ಇದ್ರು. ಹೀಗಾಗಿ ಆರೋಪಿಗಳನ್ನು ಹೀಗೆ ತುಂಬಾ ಸಮಯದವರೆಗೆ ಜೈಲಿನಲ್ಲಿಡಲು ಸಾಧ್ಯವಿಲ್ಲ ಎಂದಿರೋ ಕೋರ್ಟ್, 35 ಸಾವಿರ ಬಾಂಡ್ ಆಧಾರದ ಮೇಲೆ ಜಾಮೀನು ಕೊಟ್ಟಿದೆ. ಅದೇ ರೀತಿ ತನ್ನ ಅನುಮತಿ ಇಲ್ಲದೇ ದೆಹಲಿ ಬಿಟ್ಟು ಹೊರಹೋಗುವಂತಿಲ್ಲ ಅಂತ ಸೂಚಿಸಿದೆ.
-masthmagaa.com
Contact Us for Advertisement