ದೆಹಲಿ ಹಿಂಸೆ ಕೇಸ್​​ನ ಐವರು ಆರೋಪಿಗಳಿಗೆ ಜಾಮೀನು!

masthmagaa.com:

ದೆಹಲಿ ಹಿಂಸಾಚಾರ ಕೇಸ್​​ನ ಎಫ್​ಐಆರ್​​ನಲ್ಲಿ ಹೆಸರಿಸಲಾಗಿದ್ದ ಐವರು ಆರೋಪಿಗಳಿಗೆ ಕೋರ್ಟ್​ ಜಾಮೀನು ನೀಡಿದೆ. ಹಿಂಸಾಚಾರದ ವೇಳೆ ರತನ್ ಲಾಲ್ ಅನ್ನೋ ಹೆಡ್​ ಕಾನ್​ಸ್ಟೇಬಲ್ ಹತ್ಯೆ ಮತ್ತು ಡಿಸಿಪಿ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿತ್ತು. ತುಂಬಾ ಸಮಯದಿಂದ ಜೈಲಿನಲ್ಲೇ ಇದ್ರು. ಹೀಗಾಗಿ ಆರೋಪಿಗಳನ್ನು ಹೀಗೆ ತುಂಬಾ ಸಮಯದವರೆಗೆ ಜೈಲಿನಲ್ಲಿಡಲು ಸಾಧ್ಯವಿಲ್ಲ ಎಂದಿರೋ ಕೋರ್ಟ್​​​, 35 ಸಾವಿರ ಬಾಂಡ್ ಆಧಾರದ ಮೇಲೆ ಜಾಮೀನು ಕೊಟ್ಟಿದೆ. ಅದೇ ರೀತಿ ತನ್ನ ಅನುಮತಿ ಇಲ್ಲದೇ ದೆಹಲಿ ಬಿಟ್ಟು ಹೊರಹೋಗುವಂತಿಲ್ಲ ಅಂತ ಸೂಚಿಸಿದೆ.

-masthmagaa.com

Contact Us for Advertisement

Leave a Reply