masthmagaa.com:
ಐಪಿಎಎಲ್ನ ಮುಂದಿನ ಸೀಸನ್ಗೆ ಆಟಗಾರರ ರಿಟೆನ್ಷನ್ ಪ್ರಕ್ರಿಯೆ ನಡೆದಿದೆ. ಇದರಲ್ಲಿ ಆರ್ಸಿಬಿ ತಂಡ ಕೊಹ್ಲಿ, ಮ್ಯಾಕ್ಸ್ವೆಲ್ ಮತ್ತು ಮೊಹಮ್ಮದ್ ಸಿರಾಜ್ರನ್ನ ಉಳಿಸಿಕೊಂಡಿದೆ. ಮುಂಬೈ ಇಂಡಿಯನ್ಸ್ ರೋಹಿತ್, ಬೂಮ್ರಾ, ಸೂರ್ಯಕುಮಾರ್, ಪೊಲಾರ್ಡ್ರನ್ನ ಉಳಿಸಿಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಧೋನಿ, ರವೀಂದ್ರ ಜಡೇಜಾ, ಮೋಯಿನ್ ಅಲಿ ಮತ್ತು ರುತುರಾಜ್ ಗಾಯಕ್ವಾಡ್ರನ್ನ ರಿಟೈನ್ ಮಾಡ್ಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂತ್, ಅಕ್ಷರ್ ಪಟೇಲ್, ಪೃಥ್ವಿ ಶಾ ಮತ್ತು ನಾರ್ಕಿಯಾರನ್ನ ಉಳಿಸಿಕೊಂಡಿದೆ. ಕೆಕೆಆರ್ ತಂಡ ರಸೆಲ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್ ಮತ್ತು ಸುನಿಲ್ ನರೈನ್ರನ್ನ ರಿಟೈನ್ ಮಾಡ್ಕೊಂಡಿದೆ. ಪಂಜಾಬ್ ಮಯಾಂಕ್ ಅಗರ್ವಾಲ್ ಮತ್ತು ಅರ್ಷ್ದೀಪ್ ಸಿಂಗ್ರನ್ನ ಉಳಿಸಿಕೊಂಡಿದೆ. ರಾಜಸ್ಥಾನ ಸಂಜು ಸ್ಯಾಮ್ಸನ್, ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ರನ್ನ ರಿರ್ಟ್ ಮಾಡಿದೆ. ಹೈದ್ರಾಬಾದ್ ವಿಲಿಯಮ್ಸನ್, ಅಬ್ದುಲ್ ಸಮದ್ ಮತ್ತು ಉಮ್ರಾನ್ ಮಲಿಕ್ರನ್ನ ಉಳಿಸಿಕೊಂಡಿದೆ. ಈ ವರ್ಷದಿಂದ ಐಪಿಎಲ್ಗೆ ಇನ್ನೆರಡು ತಂಡ ಸೇರ್ತಿವೆ ಅಹ್ಮದಾಬಾದ್ ಮತ್ತು ಲಕ್ನೌ.. ಇದರಲ್ಲಿ ಲಕ್ನೌ ಫ್ರಾಂಚೈಸ್ ಜೊತೆ ಪಂಜಾಬ್ ತಂಡದ ಕೆಎಲ್ ರಾಹುಲ್ ಮತ್ತು ಹೈದ್ರಾಬಾದ್ ತಂಡದ ರಶಿದ್ ಖಾನ್ ಬ್ಯಾಕ್ಚಾನಲ್ನಲ್ಲಿ ಮಾತುಕತೆ ನಡೆಸ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಆ ಇಬ್ಬರೂ ಆಟಗಾರರನ್ನ ತಂಡಗಳು ರಿಟೈನ್ ಮಾಡದೇ ರಿಲೀಸ್ ಮಾಡಿವೆ. ಹೀಗೆ ರಿಲೀಸ್ ಮಾಡಿದ ಆಟಗಾರರು ಹರಾಜಿಗೆ ಹೋಗಲಿದ್ದಾರೆ.
-masthmagaa.com
Contact Us for Advertisement