masthmagaa.com:
ಕಿಚ್ಚ ಸುದೀಪ್ ಅವರಿಗೆ ಇತ್ತೀಚೆಗೆ ಅಪರಿಚಿತರಿಂದ ಬೆದರಿಕೆ ಪತ್ರ ಬಂದಿತ್ತು. ಬೆದರಿಕೆ ಪತ್ರ ಕಳುಹಿಸಿದ್ದು ಯಾರು ಎಂದು ಪೋಲಿಸರು ತನಿಖೆ ನಡೆಸಿದ್ದರು. ಇದೀಗ ತನಿಖೆ ಯಶಸ್ವಿಯಾಗಿ ಆರೋಪಿ ರಮೇಶ್ ಕಿಟ್ಟಿ ಎಂದು ತಿಳಿದು ಬಂದಿದೆ. ರಮೇಶ್ ಕಿಟ್ಟಿ ಒಬ್ಬ ನಿರ್ದೇಶಕರು ಹಾಗೂ ಕಿಚ್ಚ ಸುದೀಪ್ ಅವರಿಗೆ ಆತ್ಮೀಯರು ಕೂಡ ಆಗಿದ್ದಾರೆ.
ಕಿಚ್ಚ ಸುದೀಪ್ ಅವರ ಚಾರಿಟಬಲ್ ಟ್ರಸ್ಟ್ನ್ನು ರಮೇಶ್ ಕಿಟ್ಟಿ ನೋಡಿಕೊಳ್ಳುತ್ತಿದ್ದರು. ಚಾರಿಟಬಲ್ ಟ್ರಸ್ಟ್ಗಾಗಿ ರಮೇಶ್ ಕಿಟ್ಟಿ ಎರಡು ಕೋಟಿ ರೂ. ಹೂಡಿಕೆ ಮಾಡಿದ್ದರಂತೆ. ಬಳಿಕ ರಮೇಶ್ ಕಿಟ್ಟಿ ಆ ಹಣವನ್ನು ಸುದೀಪ್ ಬಳಿ ಕೇಳಿದಾಗ ಅವರು ಹಿಂತಿರುಗಿಸಲಿಲ್ಲ. ಅದಕ್ಕಾಗಿ ಬೆದರಿಕೆ ಪತ್ರ ಬರೆದಿದ್ದಾರೆ ಎನ್ನಲಾಗುತ್ತದೆ. ಈ ಮಾತನ್ನು ಸ್ವತಃ ರಮೇಶ್ ಕಿಟ್ಟಿನೇ ಒಪ್ಪಿಕೊಂಡಿದ್ದಾರೆಂದು ವರದಿಯಾಗಿದೆ.
ಇನ್ನು ಈ ಪತ್ರದ ಹಿಂದೆ ಇನ್ನು ಹಲವರ ಕೈವಾಡವಿದೆ ಎಂದು ಶಂಕಿಸಲಾಗಿದೆ. ಇದಕ್ಕಾಗಿ ಪೋಲಿಸರು ಇನ್ನು ತನಿಖೆ ನಡಿಸಲಿದ್ದಾರೆ ಎನ್ನಲಾಗುತ್ತಿದೆ. ಪೋಲಿಸರು ಈ ಬಗ್ಗೆ ತನಿಖೆ ನಡೆಸಿದಾಗ ಮೊದಲು ಬೆದರಿಕೆ ಪತ್ರ ಎಲ್ಲಿಂದ ಬಂದಿತ್ತು ಅನ್ನೋದನ್ನು ಪತ್ತೆ ಹಚ್ಚಿದ್ದರು. ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸ್ವಿಫ್ಟ್ ಕಾರಿನಲ್ಲಿ ಬಂದು ಮನೆಮುಂದೆ ಪೋಸ್ಟ್ ಮಾಡಿದ್ದರು. ಆದರೆ, ಆ ಕಾರಿನದ್ದು ನಕಲಿ ನಂಬರ್ ಪ್ಲೇಟ್ ಆಗಿತ್ತು. ಇನ್ನೊಂದು ಕಡೆ ಬೆದರಿಕೆ ಪತ್ರ ಸುದೀಪ್ ಅವರ ಆಪ್ತರಾಗಿದ್ದವರಿಂದಲೇ ಬಂದಿದೆ ಎಂದು ಹೇಳಲಾಗುತ್ತಿತ್ತು. ಹೀಗಾಗಿ ಕಿಚ್ಚ ಸುದೀಪ್ ಅವರ ಮಾಜಿ ಕಾರು ಚಾಲಕನ ಮೇಲೆ ಅನುಮಾನ ಮೂಡಿತ್ತು. ಕೆಲವು ದಿನಗಳ ಹಿಂದಷ್ಟೇ ಕಾರು ಚಾಲಕ ಹಾಗೂ ಸುದೀಪ್ ಅವರ ಆಪ್ತರಾದಂತಹ ಜಾಕ್ ಮಂಜು ಅವರನ್ನು ಕೂಡ ವಿಚಾರಣೆ ಮಾಡಲಾಗಿತ್ತು.
-masthmagaa.com
Contact Us for Advertisement