masthmagaa.com:
ಕಿಸಾನ್ ಮಹಾಪಂಚಾಯತ್ನ್ನು ರಾಜಕೀಯ ಸಮಾವೇಶ ಅಂತ ಕರೆದಿರೋ ಕೇಂದ್ರ ಸಚಿವ, ಮುಜಾಫರ್ನಗರದ ಸಂಸದ ಸಂಜೀವ್ ಬಲ್ಯಾನ್, ಭಾರತ್ ಕಿಸಾನ್ ಯೂನಿಯನ್ ಲೀಡರ್ ರಾಕೇಶ್ ಟಿಕೈತ್ ದೇಶವಿರೋಧಿಗಲ ಕಪಿಮುಷ್ಠಿಯಲ್ಲಿದ್ದಾರೆ ಅಂತ ಹೇಳಿದ್ದಾರೆ. ರೇಡಿಯೋ ಪಾಕಿಸ್ತಾನ್ ಟ್ವೀಟ್ ಉಲ್ಲೇಖಿಸಿದ ಸಂಜೀವ್ ಬಲ್ಯಾನ್, ರೈತರಿಗೆ ಪಾಕಿಸ್ತಾನದ ಹೊಗಳಿಕೆಯ ಅಗತ್ಯತೆ ಇದ್ಯಾ..? ಅಂತ ಪ್ರಶ್ನಿಸಿದ್ದಾರೆ. ರಾಜಕೀಯ ಪಕ್ಷಗಳು ರೈತರನ್ನು ತಮ್ಮ ಅಜೆಂಡಾಗಾಗಿ ಮಿಸ್ ಯೂಸ್ ಮಾಡ್ತಿದ್ದಾರೆ ಅಂತ ಕೂಡ ಸಂಜೀವ್ ಬಲ್ಯಾನ್ ಹೇಳಿದ್ದಾರೆ. ಇನ್ನು ನಿನ್ನೆ ಮಹಾಪಂಚಾಯತ್ನಲ್ಲಿ ರಾಕೇಶ್ ಟಿಕೈತ್ ಅಲ್ಲಾಹು ಅಕ್ಬರ್ ಅಂತ ಘೋಷಣೆ ಕೂಗಿರೋದು ಕೂಡ ವಿವಾದವಾಗಿದೆ. ಮೊದಲಿಗೆ ಅಲ್ಲಾಹು ಅಕ್ಬರ್ ಅನ್ನೋ ರಾಕೇಶ್ ಟಿಕೈತ್, ನಂತರ ಹರ ಹರ ಮಹಾದೇವ್ ಮತ್ತು ಅಲ್ಲಾಹು ಅಕ್ಬರ್ ಇವೆರಡೂ ಈ ನೆಲದ ಘೋಷಣೆ.. ಇದನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಅಂತ ಹೇಳಿದ್ರು. ಆದ್ರೆ ಬಿಜೆಪಿ ಇದು ಬರೀ ರೈತರ ಪ್ರತಿಭಟನೆಯಾಗಿ ಉಳಿದಿಲ್ಲ ಅನ್ನೋದಕ್ಕೆ ಇದೇ ಸಾಕ್ಷಿ ಅಂತ ಕಿಡಿಕಾರಿದೆ. ಇವೆಲ್ಲದ್ರ ಜೊತೆಗೆ ರಾಕೇಶ್ ಟಿಕೈತ್ ಮತ್ತು ಅವರ ಬೆಂಬಲಿಗ ಫೈವ್ ಸ್ಟಾರ್ ಹೋಟೆಲ್ನಲ್ಲಿ ಕೂತಿರೋ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮತ್ತೊಂದ್ಕಡೆ ಹರಿಯಾಣದ ಕರ್ನಲ್ನಲ್ಲಿ ಮಂಗಳವಾರ ರೈತರು ಕಿಸಾನ್ ಮಹಾಪಂಚಾಯತ್ ಕರೆದಿದ್ದಾರೆ. ಹೀಗಾಗಿ ಅಲ್ಲಿ ಕಂಡು ಕೇಳರಿಯದ ಭದ್ರತೆ ಏರ್ಪಡಿಸಲಾಗಿದೆ.
-masthmagaa.com
Contact Us for Advertisement