ಮಹಾಪಂಚಾಯತ್​ನಲ್ಲಿ ಅಲ್ಲಾಹು ಅಕ್ಬರ್ ಎಂದು ಕೂಗಿದ ರೈತರು!

masthmagaa.com:

ಕಿಸಾನ್ ಮಹಾಪಂಚಾಯತ್​​ನ್ನು ರಾಜಕೀಯ ಸಮಾವೇಶ ಅಂತ ಕರೆದಿರೋ ಕೇಂದ್ರ ಸಚಿವ, ಮುಜಾಫರ್​ನಗರದ ಸಂಸದ ಸಂಜೀವ್ ಬಲ್ಯಾನ್​, ಭಾರತ್ ಕಿಸಾನ್ ಯೂನಿಯನ್ ಲೀಡರ್ ರಾಕೇಶ್ ಟಿಕೈತ್​ ದೇಶವಿರೋಧಿಗಲ ಕಪಿಮುಷ್ಠಿಯಲ್ಲಿದ್ದಾರೆ ಅಂತ ಹೇಳಿದ್ದಾರೆ. ರೇಡಿಯೋ ಪಾಕಿಸ್ತಾನ್​ ಟ್ವೀಟ್ ಉಲ್ಲೇಖಿಸಿದ ಸಂಜೀವ್ ಬಲ್ಯಾನ್​, ರೈತರಿಗೆ ಪಾಕಿಸ್ತಾನದ ಹೊಗಳಿಕೆಯ ಅಗತ್ಯತೆ ಇದ್ಯಾ..? ಅಂತ ಪ್ರಶ್ನಿಸಿದ್ದಾರೆ. ರಾಜಕೀಯ ಪಕ್ಷಗಳು ರೈತರನ್ನು ತಮ್ಮ ಅಜೆಂಡಾಗಾಗಿ ಮಿಸ್​ ಯೂಸ್ ಮಾಡ್ತಿದ್ದಾರೆ ಅಂತ ಕೂಡ ಸಂಜೀವ್ ಬಲ್ಯಾನ್ ಹೇಳಿದ್ದಾರೆ. ಇನ್ನು ನಿನ್ನೆ ಮಹಾಪಂಚಾಯತ್​ನಲ್ಲಿ ರಾಕೇಶ್ ಟಿಕೈತ್ ಅಲ್ಲಾಹು ಅಕ್ಬರ್ ಅಂತ ಘೋಷಣೆ ಕೂಗಿರೋದು ಕೂಡ ವಿವಾದವಾಗಿದೆ. ಮೊದಲಿಗೆ ಅಲ್ಲಾಹು ಅಕ್ಬರ್ ಅನ್ನೋ ರಾಕೇಶ್ ಟಿಕೈತ್​, ನಂತರ ಹರ ಹರ ಮಹಾದೇವ್ ಮತ್ತು ಅಲ್ಲಾಹು ಅಕ್ಬರ್ ಇವೆರಡೂ ಈ ನೆಲದ ಘೋಷಣೆ.. ಇದನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಅಂತ ಹೇಳಿದ್ರು. ಆದ್ರೆ ಬಿಜೆಪಿ ಇದು ಬರೀ ರೈತರ ಪ್ರತಿಭಟನೆಯಾಗಿ ಉಳಿದಿಲ್ಲ ಅನ್ನೋದಕ್ಕೆ ಇದೇ ಸಾಕ್ಷಿ ಅಂತ ಕಿಡಿಕಾರಿದೆ. ಇವೆಲ್ಲದ್ರ ಜೊತೆಗೆ ರಾಕೇಶ್ ಟಿಕೈತ್ ಮತ್ತು ಅವರ ಬೆಂಬಲಿಗ ಫೈವ್ ಸ್ಟಾರ್ ಹೋಟೆಲ್​​ನಲ್ಲಿ ಕೂತಿರೋ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮತ್ತೊಂದ್ಕಡೆ ಹರಿಯಾಣದ ಕರ್ನಲ್​​ನಲ್ಲಿ ಮಂಗಳವಾರ ರೈತರು ಕಿಸಾನ್ ಮಹಾಪಂಚಾಯತ್ ಕರೆದಿದ್ದಾರೆ. ಹೀಗಾಗಿ ಅಲ್ಲಿ ಕಂಡು ಕೇಳರಿಯದ ಭದ್ರತೆ ಏರ್ಪಡಿಸಲಾಗಿದೆ.

-masthmagaa.com

Contact Us for Advertisement

Leave a Reply