masthmagaa.com:
ತಮಿಳುನಾಡಿನಲ್ಲಿ ನರಭಕ್ಷಕ ಹುಲಿಯ ಕಾಟ ಶುರುವಾಗಿದೆ. ಹೀಗಾಗಿ ಪ್ರಿನ್ಸಿಪಲ್ ಚೀಫ್ ಕನ್ಸರ್ವೇಟರ್ ಆಫ್ ಫಾರೆಸ್ಟ್ ಟಿ-23 ಹುಲಿಯನ್ನು ಬೇಟೆಯಾಡಲು ನಿರ್ಧರಿಸಿದ್ದಾರೆ. ಆದ್ರೆ ಮದ್ರಾಸ್ ಹೈಕೋರ್ಟ್ನಲ್ಲಿ ಈ ನಿರ್ಧಾರವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿ ವಿಚಾರಣೆ ನಡೆಸಿರೋ ಕೋರ್ಟ್, ನಮ್ಮ ದೇಶದಲ್ಲಿ ಕೆಲವೇ ಹುಲಿಗಳು ಉಳಿದುಕೊಂಡಿವೆ. ಹೀಗಾಗಿ ಕೂಡಲೇ ಹುಲಿಯನ್ನು ಕೊಲ್ಲೋಕೆ ಹೋಗ್ಬೇಡಿ. ಯಾಕಂದ್ರೆ ಅದು ನರಭಕ್ಷಕ ಹುಲಿಯಾಗಿರದೇ ಇರಬಹುದು ಅಂತ ಹೇಳಿದೆ.
-masthmagaa.com
Contact Us for Advertisement