masthmagaa.com:
ಕ್ರೂಸ್ ಶಿಪ್ ಮಾದಕ ವಸ್ತು ಕೇಸ್ನಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಒಟ್ಟು 8 ಜನರನ್ನ ಮುಂಬೈ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಅಂದ್ರೆ ಆರ್ಯನ್ ಖಾನ್ ಮತ್ತು ಉಳಿದವರು ಜೈಲು ಪಾಲಾಗಿದ್ದಾರೆ. ಆದ್ರೆ ಆದೇಶ ಬರುವಾಗ ಕತ್ತಲೆ ಆಗಿದ್ದರಿಂದ ಬೆಳಗ್ಗೆವರೆಗೆ ಎನ್ಸಿಬಿ ಕಚೇರಿಯಲ್ಲೇ ಉಳಿಯಲಿದ್ದಾರೆ ಆರ್ಯನ್ ಖಾನ್ ಮತ್ತು ಇತರ ಆರೋಪಿಗಳು. ಮತ್ತೊಂದುಕಡೆ ನಾಳೆ ಬೆಳಗ್ಗೆ 11 ಗಂಟೆಗೆ ಆರ್ಯನ್ ಖಾನ್ನ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ. ಅದರೊಳಗೆ ಆರ್ಯನ್ಗೆ ಜಾಮೀನು ಸಂಬಂಧ ಎನ್ಸಿಬಿ ತನ್ನ ಪ್ರತಿಕ್ರಿಯೆ ನೀಡುವಂತೆಯೂ ಸೂಚಿಸಿದೆ ಕೋರ್ಟ್. ಇದಕ್ಕೂ ಮುನ್ನ ವಾದ ಮಂಡಿಸಿದ್ದ ಎನ್ಸಿಬಿ, ಅಕ್ಟೋಬರ್ 11ರವರೆಗೆ ಆರ್ಯನ್ ಖಾನ್ರನ್ನು ನಮ್ಮ ಕಸ್ಟಡಿಗೆ ನೀಡಿ. ಈ ಪ್ರಕರಣದಲ್ಲಿ ಈಗಲೂ ಹಲವರನ್ನು ಬಂಧಿಸ್ತಿದ್ದೀವಿ. ಅವರನ್ನು ಎದುರು ಬದುರು ಕೂರಿಸಿ ಮಾತಾಡ್ಬೇಕು ಅಂತ ಮಂಡಿಸಿತ್ತು. ಇನ್ನು ಪ್ರಕರಣದ 17ನೇ ಆರೋಪಿಯಾಗಿರೋ ಅಚಿತ್ ಕುಮಾನನ್ನು ಅಕ್ಟೋಬರ್ 9ವರೆಗೆ ಎನ್ಸಿಬಿ ಕಸ್ಟಡಿಗೆ ನೀಡಲಾಗಿದೆ.
-masthmagaa.com
Contact Us for Advertisement