ಕುವೈತ್​ ಪ್ರವಾಸದಲ್ಲಿ ಎಸ್​ ಜೈಶಂಕರ್​! ಯಾಕೆ ಮುಖ್ಯ..?

masthmagaa.com:

ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಗಲ್ಫ್ ರಾಷ್ಟ್ರ ಕುವೈತ್​​​ಗೆ ತಲುಪಿದ್ದಾರೆ. ಎರಡು ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆಗಾಗಿ ಜೈಶಶಂಕರ್ ಅಲ್ಲಿಗೆ ಹೋಗಿದ್ದಾರೆ. ಭಾರತ- ಕುವೈತ್ ಮಧ್ಯೆ ಡೀಪ್ ಕನೆಕ್ಷನ್ ಇದೆ. ಲಕ್ಷಾಂತರ ಭಾರತೀಯರು ಅಲ್ಲಿ ಕೆಲಸ ಮಾಡ್ತಾರೆ. ಈ ಭೇಟಿ ವೇಳೆ ವ್ಯಾಪಾರ, ಇಂಧನ, ಕಾರ್ಮಿಕ ವ್ಯವಹಾರ, ಇನ್ಫಾರ್ಮೇಶನ್ ಟೆಕ್ನಾಲಜಿ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಕೆಲ ತಿಂಗಳ ಹಿಂದೆ ಕುವೈತ್ ವಿದೇಶಾಂಗ ಸಚಿವ ಶೇಕ್ ಅಹಮದ್ ನಾಸೆರ್ ಅಲ್ ಮಹಮದ್ ಅಲ ಸಬಾಹ್ ಭಾರತಕ್ಕೆ ಭೇಟಿ ನೀಡಿದ್ದರು. ಇತ್ತೀಚೆಗೆ ಭಾರತದ ಕೊರೋನ ಎರಡನೇ ಅಲೆ ವೇಳೆ ಮೆಡಿಕಲ್ ಆಕ್ಸಿಜನ್ ಕೊರತೆ ಉಂಟಾದಾಗ ಕುವೈತ್ ದೊಡ್ಡ ಪ್ರಮಾಣದಲ್ಲಿ ಅದನ್ನ ಪೂರೈಸಿ ಸಹಾಯ ಮಾಡಿತ್ತು.

-masthmagaa.com

Contact Us for Advertisement

Leave a Reply