masthmagaa.com:
ಇತ್ತೀಚೆಗೆ ಎವರ್ ಗ್ರೀನ್ ಕಂಪನಿಯ ಎವರ್ಗಿವನ್ ಹಡಗು ಅಡ್ಡಲಾಗಿ ನಿಂತು ಸುಯೇಜ್ ಕಾಲುವೆ ಬ್ಲಾಕ್ ಆಗಿದ್ದು ನಿಮಗೆಲ್ಲಾ ಗೊತ್ತೇ ಇದೆ. ಒಂದು ವಾರದ ನಿರಂತರ ಪರಿಶ್ರಮದ ಬಳಿಕ ಹಡಗನ್ನು ಪಕ್ಕಕ್ಕೆ ಸರಿಸಲು ಸಾಧ್ಯವಾಗಿತ್ತು. ಇದೀಗ ಎವರ್ಗ್ರೀನ್ ಹಡಗು ಮುಂದಕ್ಕೆ ಹೋಗಲು ಈಜಿಪ್ಟ್ ತಡೆಯೊಡ್ಡಿದೆ. ಮೊದಲು ಹಡಗಿನ ಕಂಪನಿ ಈಜಿಪ್ಟ್ಗೆ ಆದ ನಷ್ಟವನ್ನು ತುಂಬಿಕೊಡಬೇಕು.. ಅಲ್ಲಿಯವರೆಗೆ ಹಡಗನ್ನು ಬಿಡುವುದಿಲ್ಲ ಅಂತ ಈಜಿಪ್ಟ್ ಹೇಳಿದೆ. ಮಾರ್ಚ್ 31ರಂದು ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸುಯೇಜ್ ಕಾಲುವೆ ಅಥಾರಿಟಿ, ಈಜಿಪ್ಟ್ , ಹಡಗಿನ ಕಂಪನಿ ಬಳಿ 1 ಬಿಲಿಯನ್ ಡಾಲರ್ ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ ಏಳೂವರೆ ಸಾವಿರ ಕೋಟಿ ರೂಪಾಯಿ ಪರಿಹಾರ ಕೇಳಲಿದೆ ಅಂತ ಮಾಹಿತಿ ನೀಡಿತ್ತು. ಆದ್ರೀಗ ಈಜಿಪ್ಟ್ ಪರಿಹಾರದ ಮೊತ್ತ ಎಷ್ಟು ಅಂತ ಬಹಿರಂಗಪಡಿಸಿಲ್ಲ.. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಪಾನ್ ಮೂಲದ ಹಡಗಿನ ಮಾಲೀಕತ್ವದ ಸಂಸ್ಥೆ, ನಮಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ.. ಈವರೆಗೆ ನಮ್ಮ ಬಳಿ ಯಾರೂ ಸುಯೇಜ್ ಕಾಲುವೆ ಬ್ಲಾಕ್ ಸಂಬಂಧ ಪರಿಹಾರ ಕೇಳಿಲ್ಲ ಅಂತ ಹೇಳಿದೆ. ಭಾರತಕ್ಕೆ ಚಿಂತೆಯ ವಿಚಾರ ಯಾಕೆ ಅಂದ್ರೆ ಎವರ್ ಗಿವನ್ ಹಡಗಿನಲ್ಲಿ 25 ಮಂದಿ ಭಾರತೀಯ ಸಿಬ್ಬಂದಿ ಕೂಡ ಇದ್ದಾರೆ.
-masthmagaa.com
Contact Us for Advertisement