masthmagaa.com:
ದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಪ್ರತಿಭಟನೆ, ಹಿಂಸೆ ಮತ್ತು ಸ್ಫೋಟದಂತ ಘಟನೆಗಳು ನಡೆಯುತ್ತಿರುವ ಹೊತ್ತಲ್ಲೇ ರಾಜಕೀಯ ಕೂಡ ಜೋರಾಗಿದೆ. ಟಿಎಂಸಿಯ ಐವರು ನಾಯಕರು ಬಿಜೆಪಿ ಸೇರಲು ದೆಹಲಿಗೆ ಹಾರಿದ್ದಾರೆ. ಮೊದಲಿದ್ದ ಪ್ಲಾನ್ ಪ್ರಕಾರ ಅಮಿತ್ ಶಾ ನಾಳೆ ಪಶ್ಚಿಮ ಬಂಗಾಳದ ಹೌರಾದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಭಾಗಿಯಾಗಬೇಕಿತ್ತು. ಆ ಸಮಾವೇಶದ ವೇಳೆಯೇ ಟಿಎಂಸಿಯ ಐವರು ನಾಯಕರು ಬಿಜೆಪಿ ಸೇರಬೇಕಿತ್ತು. ಆದ್ರೆ ಕೆಲ ಕಾರಣಗಳಿಂದಾಗಿ ಗೃಹಸಚಿವ ಅಮಿತ್ ಶಾ ಪಶ್ಚಿಮ ಬಂಗಾಳ ಪ್ರವಾಸ ರದ್ದಾಗಿದ್ದು, ಟಿಎಂಸಿ ನಾಯಕರನ್ನೇ ವಿಶೇಷ ಚಾರ್ಟರ್ ವಿಮಾನದಲ್ಲಿ ದೆಹಲಿಗೆ ಕರೆಸಲಾಗಿದೆ. ದೆಹಲಿಯಲ್ಲೇ ಇವರು ಬಿಜೆಪಿ ಸೇರಲಿದ್ಧಾರೆ. ಇವರಲ್ಲಿ ಮಾಜಿ ಅರಣ್ಯ ಸಚಿವ ರಜಿಬ್ ಬ್ಯಾನರ್ಜಿ, ಶಾಸಕರಾದ ಬೈಶಾಲಿ ದಲ್ಮಿಯ, ಪ್ರಬಿರ್ ಘೋಶಾಲ್ ಕೂಡ ಸೇರಿದ್ಧಾರೆ.
-masthmagaa.com
Contact Us for Advertisement