masthmagaa.com:
ಇಷ್ಟು ದಿನ ಜನರ ಪಾಲಿಗೆ ದುಸ್ವಪ್ನವಾಗಿದ್ದ ತಾಲಿಬಾನಿಗಳಿಗೆ ಈಗ ಐಎಸ್ ಉಗ್ರರ ಕಾಟ ಶುರುವಾಗಿದೆ. ಮೊನ್ನೆಯಷ್ಟೇ ತಾಲಿಬಾನ್ ಸರ್ಕಾರ ಸಚಿವ ಝೈಬುಲ್ಲಾ ಮುಜಾಹಿದ್ ತಾಯಿಯ ಮರಣಾನಂತರ ಪ್ರಾರ್ಥನೆ ನಡೆಯುತ್ತಿದ್ದ ಮಸೀದಿ ಬಳಿ ದಾಳಿ ನಡೆಸಿದ್ರು. ಇದ್ರ ಬೆನ್ನಲ್ಲೇ ಅಲರ್ಟ್ ಆಗಿರೋ ತಾಲಿಬಾನಿಗಳು ಇವರನ್ನ ಬಿಟ್ರೆ ನಮ್ಗೇನೇ ಉಳಿಗಾಲ ಇಲ್ಲ ಅಂತ ರೇಡ್ ಮಾಡೋಕೆ ಶುರು ಮಾಡಿದ್ದಾರೆ. ಕಾಬೂಲ್ನಲ್ಲಿ ನಾಲ್ವರು ಐಎಸ್ ಸಂಘಟನೆಗೆ ಸೇರಿದ ಉಗ್ರರನ್ನು ವಶಕ್ಕೆ ಪಡ್ಕೊಂಡಿದ್ದೀವಿ ಅಂತ ತಾಲಿಬಾನ್ ಘೋಷಿಸಿದೆ. ಬಂಧಿತರಿಂದ ಶಸ್ತ್ರಾಸ್ತ್ರ ಮತ್ತು ದಾಖಲೆಗಳನ್ನು ಕೂಡ ವಶಕ್ಕೆ ಪಡ್ಕೊಂಡಿದ್ದೀವಿ ಅಂತ ಝೈಬುಲ್ಲಾ ಮುಜಾಹಿದ್ ಮಾಹಿತಿ ನೀಡಿದ್ದಾರೆ.
-masthmagaa.com
Contact Us for Advertisement