masthmagaa.com:
ದೆಹಲಿ: ಜನವರಿ 26ರ ಗಣರಾಜ್ಯೋತ್ಸವದಂದು ನಡೆದ ಹಿಂಸಾಚಾರ ಪ್ರಕರಣ ಸಂಬಂಧ ಪಂಜಾಬಿ ನಟ ದೀಪ್ ಸಿಧು ಅವರಿಗಾಗಿ ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ. ಅವತ್ತಿನ ಬಳಿಕ ಅವರು ಎಲ್ಲಿ ಹೋದ್ರು ಅಂತ ಯಾರಿಗೂ ಗೊತ್ತಿಲ್ಲ.
ಆದ್ರೆ ಅವರ ಫೇಸ್ಬುಕ್ ಖಾತೆಗೆ ಮಾತ್ರ ನಿರಂತರವಾಗಿ ವಿಡಿಯೋಗಳು ಅಪ್ಲೋಡ್ ಆಗುತ್ತಲೇ ಇವೆ.. ಇದ್ರ ಮೂಲ ಹುಡುಕಿದ ಪೊಲೀಸರಿಗೆ ಈ ವಿಡಿಯೋಗಳನ್ನು ದೀಪ್ ಸಿಧು ಅಪ್ಲೋಡ್ ಮಾಡ್ತಿರೋದಲ್ಲ.. ಆತನ ವಿದೇಶದಲ್ಲಿರುವ ಗೆಳತಿಯೊಬ್ಬರು ಆಗಾಗ ಒಂದೊಂದು ವಿಡಿಯೋ ಅಪ್ಲೋಡ್ ಮಾಡ್ತಿದ್ದಾರೆ.. ಈ ಕಡೆಯಿಂದ ಸಿಧು ವಿಡಿಯೋ ರೆಕಾರ್ಡ್ ಮಾಡಿ ಆಕೆಗೆ ಕಳುಹಿಸಿಕೊಡ್ತಿದ್ದಾರೆ ಅಂತ ತಿಳಿದು ಬಂದಿದೆ. ಈ ವಿಡಿಯೋಗಳಲ್ಲಿ ರೈತರ ಪ್ರತಿಭಟನೆ ಬಗ್ಗೆ ವಿವಿಧ ರೀತಿಯ ಹೇಳಿಕೆಗಳನ್ನು ನೀಡಲಾಗ್ತಿದೆ. ಸಿಧುವನ್ನು ಹುಡುಕಲು ಪಂಜಾಬ್ನ ಕ್ರೈಂ ಬ್ರಾಂಚ್ ಮತ್ತು ಸ್ಪೆಷಲ್ ಸೆಲ್ನ ಒಂದು ತಂಡ ಅವರ ಹಿಂದೆ ಬಿದ್ದಿದೆ. ಅವರ ಮೇಲೆ 1 ಲಕ್ಷ ರೂಪಾಯಿ ಇನಾಮು ಕೂಡ ಘೋಷಿಸಲಾಗಿದೆ.
ಇನ್ನು ದೆಹಲಿ ಪೊಲೀಸ್ ಕೂಡ ಜನವರಿ 26ರ ಹಿಂಸೆಯಲ್ಲಿ ಭಾಗಿಯಾದವರನ್ನು ಬಂಧಿಸಲು ಸಹಕರಿಸಿದ್ರೆ 50 ಸಾವಿರದಿಂದ 1 ಲಕ್ಷ ರೂಪಾಯಿವರೆಗೆ ಇನಾಮು ನೀಡೋದಾಗಿ ಘೋಷಿಸಿದೆ.
-masthmagaa.com
Contact Us for Advertisement