ಕಾರ್ಕಳ: ರಸ್ತೆಗೆ ಗೋಡ್ಸೆ ನಾಮಫಲಕ ಹಾಕಿದ ಕಿಡಿಗೇಡಿಗಳು, ತೆರವುಗೊಳಿಸಿದ ಜಿಲ್ಲಾಡಳಿತ

masthmagaa.com:

ಕಾರ್ಕಳ ತಾಲೂಕಿನ ಪಡುಗಿರಿ ಗ್ರಾಮದ ರಸ್ತೆ ಒಂದಕ್ಕೆ ಕಿಡಿಗೇಡಿಗಳು ಗಾಂಧಿ ಹಂತಕ ನಾಥುರಾಮ್‌ ಗೋಡ್ಸೆ ನಾಮಫಲಕ ಹಾಕಿದ್ದು ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಸಿತ್ತು. ವಿಷಯ ತಿಳಿದ ಕೂಡಲೇ ಬೋಳ ಗ್ರಾಮ ಪಂಚಾಯಿತಿ ಪಿಡಿಒ ಹಾಗು ಕಾರ್ಕಳ ಪೋಲಿಸರು ನಾಮಫಲಕ ತೆರವುಗೊಳಿಸಿದ್ದಾರೆ. ಘಟನೆ ಸಂಬಂಧ ಮಾತಾಡಿರೋ ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಹೆಚ್‌.ಪ್ರಸನ್ನ ʻಗ್ರಾಮ ಪಂಚಾಯ್ತಿಯ ಗಮನಕ್ಕೆ ಬಾರದೇ ಈ ರೀತಿ ಆಗಿದೆ. ಈಗ ಫಲಕ ತೆರವುಗೊಳಿಸಿದ್ದೀವಿ. ಫಲಕ ಹಾಕಿದವರ ವಿರುದ್ಧ ಕ್ರಮಕೈಗೊಳ್ಳಲು ಸೂಚಿಸಿದ್ದೀವಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply