masthmagaa.com:
ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನಯಡಿ 5 ಕೆಜಿ ಅಕ್ಕಿ ಹಣವನ್ನ ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸಲು ನಿರ್ಧರಿಸಿತ್ತು. ಅದರಂತೆ ನಿನ್ನೆ ಅಂದ್ರೆ ಜು.10 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಇದಕ್ಕೆ ಚಾಲನೆ ನೀಡಿದ್ದಾರೆ. ಚಾಲನೆ ನೀಡಿದ ದಿನವೇ ಮೈಸೂರು ಜಿಲ್ಲೆಯ ಕನಕಗಿರಿಯ ನಾಲ್ವರು ಸದಸ್ಯರಿರುವ ಹೊನ್ನಮ್ಮ ಅವರ ಕುಟುಂಬಕ್ಕೆ ಅನ್ನಭಾಗ್ಯದ ಹಣ 680 ರೂಪಾಯಿ ಸಂದಾಯವಾಗಿದೆ. ಇನ್ನು ರಾಜ್ಯದ ಎಲ್ಲಾ ಫಲಾನುಭವಿಗಳ ಖಾತೆಗೆ ಹಂತ ಹಂತವಾಗಿ ಹಣ ಜಮೆಯಾಗಲಿದೆ ಅಂತ ಕಾಂಗ್ರೆಸ್ ತಿಳಿಸಿದೆ.
-masthmagaa.com
Contact Us for Advertisement