masthmagaa.com:
ಜನವರಿ 26ನೇ ತಾರೀಖು ರೈತರ ಟ್ರಾಕ್ಟರ್ ಪರೇಡ್ ವೇಳೆ ನಡೆದ ಹಿಂಸಾಚಾರ ಮತ್ತು 3 ಕೃಷಿ ಕಾನೂನುಗಳ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ್ರು ಇವತ್ತು ರಾಜ್ಯಸಭೆಯಲ್ಲಿ ಮಾತನಾಡಿದ್ರು. ‘ಗಣರಾಜ್ಯೋತ್ಸವ ದಿನದಂದು ಕೆಲ ದುಷ್ಕರ್ಮಿಗಳು ಮಾಡಿದ ಕೃತ್ಯವನ್ನ ನಾವು ಖಂಡಿಸ್ತೀವಿ. ಆದ್ರೆ ಇದಕ್ಕೆ ರೈತರು ಜವಾಬ್ದಾರರಲ್ಲ. ಕೆಲವೊಂದು ಸಮಾಜಘಾತುಕ ಶಕ್ತಿಗಳೇ ಇದಕ್ಕೆ ಕಾರಣ. ಹೀಗಾಗಿ ರೈತರಿಗೆ ಶಿಕ್ಷೆ ಕೊಡ್ಬಾರ್ದು. ರೈತರು ಧರಣಿ ನಡೆಸ್ತಿರೋ ಸ್ಥಳದಲ್ಲಿ ಸರ್ಕಾರ ಕಾಂಕ್ರಿಟ್ ಗೋಡೆಗಳನ್ನ ಕಟ್ಟುತ್ತಿರೋದ್ರಿಂದ ಏನೂ ಯೂಸ್ ಇಲ್ಲ. ಸರ್ಕಾರ ಸಮಸ್ಯೆಯನ್ನ ಶಾಂತಿಯುತವಾಗಿ ಬಗೆಹರಿಸಬೇಕು. ಕೃಷಿ ಅನ್ನೋದು ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ಅದು ಸಮವರ್ತಿ ಪಟ್ಟಿಯಲ್ಲಿ ಬರುತ್ತೆ. ಹೀಗಾಗಿ ರಾಜ್ಯ ಸರ್ಕಾರದ ಅಭಿಪ್ರಾಯವನ್ನ ಕೂಡ ತೆಗೆದುಕೊಳ್ಳಬೇಕು’ ಅಂತ ಹೆಚ್.ಡಿ. ದೇವೇಗೌಡರು ಹೇಳಿದ್ದಾರೆ.
-masthmagaa.com
Contact Us for Advertisement