ತಮಿಳುನಾಡಿನಲ್ಲಿ ವರುಣನ ಅಬ್ಬರ ಜೋರು: ಚೆನ್ನೈನಲ್ಲಿ ಎಲ್ಲೆಲ್ಲೂ ನೀರು

masthmagaa.com:

ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಮಳೆಯಬ್ಬರ ಜೋರಾಗಿದೆ. ನಗರದ ತಗ್ಗುಪ್ರದೇಶದ ಭಾಗಗಳು ಈಗಾಗಲೇ ಜಲಾವೃತಗೊಂಡಿವೆ. ರಸ್ತೆಗಳು, ಅಂಡರ್​ಪಾಸ್​ಗಳು ಜಲಾವೃತಗೊಂಡಿದ್ದು, ಟ್ರಾಫಿಕ್ ಜಾಮ್​ನಿಂದ ಜನ ಪರದಾಡಿದ್ರು. ಇದೀಗ ಫೀಲ್ಡ್​​ಗೆ ಇಳಿದಿರುವ ಎನ್​ಡಿಆರ್​ಎಫ್ ತಂಡ ಅಪಾಯದ ಸ್ಥಳಗಳಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯಾಚರಣೆ ಶುರು ಮಾಡಿದೆ. ಮುಂದಿನ ಹಲವು ದಿನಗಳ ಕಾಲ ತಮಿಳುನಾಡಿನ ವಿವಿಧ ಭಾಗಗಳಲ್ಲಿ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಸಿದೆ. ನಗರದಲ್ಲಿ 2015ರ ಬಳಿಕ ಈ ಪ್ರಮಾಣದಲ್ಲಿ ಮಳೆಯಾಗಿರೋದು ಇದೇ ಮೊದಲು.

-masthmagaa.com

Contact Us for Advertisement

Leave a Reply