ನಮ್ಮ ಜನಾಶೀರ್ವಾದ ಯಾತ್ರೆಯಿಂದ ವಿಪಕ್ಷಗಳಿಗೆ ಡಿಸ್ಟರ್ಬ್​​: ನಡ್ಡಾ

masthmagaa.com:

39 ಹೊಸ ಸಚಿವರ ಜನಾಶೀರ್ವಾದ ಯಾತ್ರೆಯ ಯಶಸ್ಸಿನಿಂದ ವಿಪಕ್ಷಗಳಿಗೆ ಡಿಸ್ಟರ್ಬ್​, ನರ್ವಸ್ ಎಲ್ಲಾ ಆಗ್ತಿದೆ. ಇದೇ ಕಾರಣಕ್ಕೆ ಕಾರ್ಯಕ್ರಮವನ್ನು ತಡೆಯೋಕೆ ಯತ್ನಿಸ್ತಿದ್ದಾರೆ ಅಂತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ. ಜನ ನಿರಂತರವಾಗಿ ಮೋದಿ ಸರ್ಕಾರಕ್ಕೆ ಬೆಂಬಲ ನೀಡೋದನ್ನು ಮುಂದುವರಿಸಿದ್ದಾರೆ. ಆಗಸ್ಟ್​ 14ರಿಂದ 28ರವರೆಗೆ ನಡೆದ ಜನಾಶೀರ್ವಾದ ಯಾತ್ರೆ 24 ಸಾವಿರ ಕಿಲೋಮೀಟರ್​​ ನಡೀತು, 5 ಸಾವಿರ ಪ್ರೋಗ್ರಾಂಗಳು ನಡೆಸಿದ್ವಿ ಅಂತ ಹೇಳಿದ್ದಾರೆ. ಆದ್ರೆ ಈ ವೇಳೆ ಹಲವಾರು ಕಡೆಗಳಲ್ಲಿ ಕೊರೋನಾ ರೂಲ್ಸ್ ಬ್ರೇಕ್ ಮಾಡಲಾಯ್ತು ಅನ್ನೋದನ್ನ ಮಾತ್ರ ಹೇಳಲೇ ಇಲ್ಲ.

-masthmagaa.com

Contact Us for Advertisement

Leave a Reply