masthmagaa.com:
39 ಹೊಸ ಸಚಿವರ ಜನಾಶೀರ್ವಾದ ಯಾತ್ರೆಯ ಯಶಸ್ಸಿನಿಂದ ವಿಪಕ್ಷಗಳಿಗೆ ಡಿಸ್ಟರ್ಬ್, ನರ್ವಸ್ ಎಲ್ಲಾ ಆಗ್ತಿದೆ. ಇದೇ ಕಾರಣಕ್ಕೆ ಕಾರ್ಯಕ್ರಮವನ್ನು ತಡೆಯೋಕೆ ಯತ್ನಿಸ್ತಿದ್ದಾರೆ ಅಂತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ. ಜನ ನಿರಂತರವಾಗಿ ಮೋದಿ ಸರ್ಕಾರಕ್ಕೆ ಬೆಂಬಲ ನೀಡೋದನ್ನು ಮುಂದುವರಿಸಿದ್ದಾರೆ. ಆಗಸ್ಟ್ 14ರಿಂದ 28ರವರೆಗೆ ನಡೆದ ಜನಾಶೀರ್ವಾದ ಯಾತ್ರೆ 24 ಸಾವಿರ ಕಿಲೋಮೀಟರ್ ನಡೀತು, 5 ಸಾವಿರ ಪ್ರೋಗ್ರಾಂಗಳು ನಡೆಸಿದ್ವಿ ಅಂತ ಹೇಳಿದ್ದಾರೆ. ಆದ್ರೆ ಈ ವೇಳೆ ಹಲವಾರು ಕಡೆಗಳಲ್ಲಿ ಕೊರೋನಾ ರೂಲ್ಸ್ ಬ್ರೇಕ್ ಮಾಡಲಾಯ್ತು ಅನ್ನೋದನ್ನ ಮಾತ್ರ ಹೇಳಲೇ ಇಲ್ಲ.
-masthmagaa.com
Contact Us for Advertisement