masthmagaa.com:
ಭಾರತವನ್ನ ಹಿಂದೂ ರಾಷ್ಟ್ರವಾಗಿ ಮಾಡ್ಬೇಕು ಅನ್ನೋ ಪರಿಕಲ್ಪನೆ ಮಹಾತ್ಮ ಗಾಂಧಿ ಅವ್ರ ವಿಚಾರಗಳಿಗೆ ವಿರುದ್ಧ ಅಂತ ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ. ಇತ್ತೀಚೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವ್ರು ಬಹಿರಂಗವಾಗಿ ಹಿಂದೂ ರಾಷ್ಟ್ರ ಅಂತ ಹೇಳಿಕೆ ನೀಡಿದ್ದು, ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ನಿತೀಶ್ ಕುಮಾರ್ ಹೀಗೆ ಹೇಳಿದ್ದಾರೆ. ಅಲ್ದೇ ಬಾಪು ಪ್ರತಿಪಾದಿಸುತ್ತಿದ್ದ ವಿಚಾರಗಳ ವಿರುದ್ಧವಾದ ಯಾವುದಕ್ಕೂ ನಾವು ಕಿವಿಕೊಡ್ಬಾರ್ದು. ನಮ್ಮ ದೇಶದಲ್ಲಿ ಎಲ್ಲಾ ಧರ್ಮದ ಜನರು ಒಗ್ಗಟ್ಟಾಗಿ ಬದುಕುತ್ತಿದ್ದಾರೆ. ಬಾಪು ಏಕತೆಗಾಗಿ ನಿಂತಿದ್ರೂ ಇದೇ ಕಾರಣಕ್ಕೆ ಅವ್ರನ್ನ ಹತ್ಯೆ ಮಾಡಲಾಯ್ತು ಅಂತ ನಿತೀಶ್ ಕುಮಾರ್ ಹೇಳಿದ್ದಾರೆ.
-masthmagaa.com
Contact Us for Advertisement