masthmagaa.com:
ರಾಜ್ಯದಲ್ಲಿ ಅವಳಿ ನಗರಗಳೆಂದೆ ಪ್ರಖ್ಯಾತಿ ಪಡೆದಿರೋ ಹುಬ್ಬಳ್ಳಿ-ಧಾರವಾಡ ಎರಡು ನಗರಗಳಿಗೂ ಸೇರಿ ಒಂದೇ ಮಹಾ ನಗರ ಪಾಲಿಕೆ ಇದ್ದು, ಇದೀಗ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಮಾಡೋದಾಗಿ ಸಚಿವ ಭೈರತಿ ಬಸವರಾಜ್ ಭರವಸೆ ನೀಡಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ ನಡೆದ ವಿಧಾನಮಂಡಲ ಅಧಿವೇಶನದ ವೇಳೆ ಶಾಸಕ ಅರವಿಂದ್ ಬೆಲ್ಲದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಭೈರತಿ ಬಸವರಾಜ್ ಇದರ ಬಗ್ಗೆ ಪರಿಶೀಲಿಸಿ, ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡ್ತೆವೆ ಎಂದಿದ್ದಾರೆ. ಇದಕ್ಕೂ ಮುಂಚೆ ಶಾಸಕ ಬೆಲ್ಲದ್ ಮಾತನಾಡಿ ಧಾರವಾಡದ ಸರ್ವಾಂಗೀಣ ಅಭಿವೃದ್ಧಿಗೆ ಪ್ರತ್ಯೇಕ ಮಹಾನಗರ ಪಾಲಿಕೆಯ ಅಗತ್ಯವಿದೆ. ಮಹಾನಗರ ಪಾಲಿಕೆಯನ್ನಾಗಿ ಮಾಡಲು ಎಲ್ಲ ಮಾನದಂಡಗಳನ್ನು ಪೂರೈಸಲಾಗಿದೆ ಅಂತ ಸರ್ಕಾರ ಹೇಳಿದೆ.
-masthmagaa.com
Contact Us for Advertisement