ಕರ್ನಾಟಕ-ಆಂಧ್ರ ಗಡಿಯ ಕಾರ್‌ನಲ್ಲಿ ಪತ್ತೆಯಾದ ಸ್ಪೋಟಕ ವಸ್ತುಗಳು!

masthmagaa.com:

ಬೆಂಗಳೂರಿನ ರಾಮೇಶ್ವರಂ ಕೆಫೆ ಘಟನೆ ಗಾಯ ಮಾಸೋ ಮೊದಲೇ, ಹಾಗೆ ಚುನಾವಣೆ ಟೈಮಲ್ಲೇ ರಾಜ್ಯದಲ್ಲಿ ಭಾರೀ ಪ್ರಮಾಣದ ಸ್ಪೋಟಕ ವಸ್ತುಗಳು ಪತ್ತೆಯಾಗಿವೆ. ಕರ್ನಾಟಕ-ಆಂಧ್ರ ಗಡಿಯಲ್ಲಿ ಸಂಚರಿಸ್ತಿದ್ದ ಕಾರ್‌ ಒಂದರಲ್ಲಿ ಈ ಸ್ಪೋಟಕಗಳು ಪತ್ತೆಯಾಗಿದ್ದು, ಹೆದ್ದಾರಿ ಚೆಕ್‌ ಪೋಸ್ಟ್‌ನಲ್ಲಿ ಪೋಲಿಸರ ತಪಾಸಣೆ ವೇಳೆ ಸಿಕ್ಕಿದೆ. ಕಾರಿನ ಡಿಕ್ಕಿಯಲ್ಲಿ ಸುಮಾರು 1,200 ಜೆಲಾಟಿನ್‌ ಕಡ್ಡಿಗಳು, ಏಳು ಬಾಕ್ಸ್‌ಗಳಲ್ಲಿ ಡಿಟೊನೇಟರ್‌ ವೈರ್‌ ಹಾಗೂ 6 ಡಿಟೊನೇಟರ್‌ಗಳು ಪತ್ತೆಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಒಬ್ಬನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ. ಜೊತೆಗೆ ಮತ್ತೊಬ್ಬ ತಲೆಮರಿಸಿಕೊಂಡಿದ್ದಾನೆ. ಅಲ್ಲದೇ ಈಗ ಪತ್ತೆಯಾಗಿರೋ ಸ್ಪೋಟಕಗಳಿಗೂ, ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಲಿಂಕ್‌ ಇರೊ ಬಗ್ಗೆ ಶಂಕೆ ವ್ಯಕ್ತವಾಗಿದೆ.

-masthmagaa.com

Contact Us for Advertisement

Leave a Reply