ಪಾಕಿಸ್ತಾನಕ್ಕೆ ದೊಡ್ಡ ಎಚ್ಚರಿಕೆ ಕೊಟ್ಟ ಭಾರತ! ಹೇಳಿದ್ದೇನು?

masthmagaa.com:

ಗಡಿಯಲ್ಲಿ ತಂಟೆ ಶುರು ಮಾಡಿರೋ ಪಾಕಿಸ್ತಾನಕ್ಕೆ ಭಾರತ ದೊಡ್ಡ ಎಚ್ಚರಿಕೆ ಕೊಟ್ಟಿದೆ. ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಸೇನೆ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ನಿನ್ನೆ ಓರ್ವ ಭಯೋತ್ಪಾದಕನನ್ನ ಹೊಡೆದುರುಳಿಸಲಾಗಿತ್ತು. ಮೃತ ಉಗ್ರರ ದೇಹವನ್ನ ವಶಕ್ಕೆ ಪಡೆಯುವ ವೇಳೆ ಭಾರತೀಯ ಸೈನಿಕರ ಮೇಲೆ ಪಾಕಿಸ್ತಾನ ಸೇನೆ ಗುಂಡು ಹಾರಿಸಿತ್ತು. ಈ ಹಿನ್ನಲೆಯಲ್ಲಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಪಾಕಿಸ್ತಾನಕ್ಕೆ ವಾರ್ನಿಂಗ್‌ ಮಾಡಿದಾರೆ. ಭಾರತಕ್ಕೆ ಶತ್ರುಗಳಿದ್ದು, ಅವರು ಭಾರತ ಬೆಳೆಯುವುದನ್ನ ತಡೆಯಲು ಬಯಸುತ್ತಾರೆ. ಅದ್ರೆ ಅವ್ರಿಗೆ ಗೊತ್ತಿರ್ಲಿ ಭಾರತೀಯ ಸೇನೆ ಈಗ ಆಧುನೀಕರಣಗೊಂಡಿದೆ. ಹೈಟೆಕ್‌ ಹಾಗೂ ಡೇಂಜರಸ್‌ ಆಗಿದೆ. ಹೀಗಾಗಿ ಯಾವುದೇ ತಪ್ಪು ಮಾಡದೇ ಬುದ್ಧಿವಂತರಾಗಿರೋದನ್ನ ಕಲಿಯಿರಿ. ಯಾಕಂದ್ರೆ ಹೊಸ ಭಾರತ ಹೆದರೋದಿಲ್ಲ. ನಾವು ಹಿಂದೆಯೂ ಸರಿಯುವುದಿಲ್ಲ. ಭಾರತ ಈಗಾಗಲೇ ಯುದ್ಧವನ್ನ ಕಂಡಿದೆ. ನಾವು ಯುದ್ಧವನ್ನ ಬಯಸೋದಿಲ್ಲ. ಆದ್ರೆ ನೀವು ಭಾರತದ ಜೊತೆಯಲ್ಲಿ ಯುದ್ಧ ಮಾಡೋಕೆ ಹೋದ್ರೆ ಬೇರೆಯವರು ನಿಮ್ಮ ಮಕ್ಕಳನ್ನ ಬೆಳೆಸಬೇಕಾಗುತ್ತೆ ಅಂತ ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply