ಸಿಧು ಮೂಸೆವಾಲ ಹತ್ಯೆ: ಪಂಜಾಬ್‌ ಸರ್ಕಾರವನ್ನ ತರಾಟೆಗೆ ತಗೊಂಡ ಹೈ ಕೋರ್ಟ್‌!

masthmagaa.com:

ಸಿಧು ಮೂಸೆವಾಲ ಹತ್ಯೆಗೆ ಸಂಬಂಧಿಸಿದಂತೆ ಪಂಜಾಬ್‌ ಮತ್ತು ಹರಿಯಾಣ ಹೈ ಕೋರ್ಟ್‌ ಇವತ್ತು ಪಂಜಾಬ್‌ ಸರ್ಕಾರವನ್ನ ಪ್ರಶ್ನಿಸಿದೆ. ಮೂಸೆವಾಲ ಅವ್ರ ಭದ್ರತೆಯನ್ನ ಯಾವ ಆಧಾರದ ಮೇಲೆ ಹಿಂಪಡೆಯಲಾಯ್ತು. ಮತ್ತು ಯಾವ್ಯಾವ ವ್ಯಕ್ತಿಗಳ ಭದ್ರತೆ ಹಿಂಪಡೆಯಲಾಗಿದೆ ಅನ್ನೋ ಮಾಹಿತಿಯನ್ನ ಯಾಕೆ ಸಾರ್ವಜನಿಕಗೊಳಿಸಿದ್ರಿ ಅಂತ ಕೇಳಿದೆ. ಜೊತೆಗೆ ಇದಕ್ಕೆ ಸಂಬಂಧಪಟ್ಟ ಜೂನ್‌ 2ರ ಒಳಗೆ ಕೋರ್ಟ್‌ಗೆ ರಿಪೋರ್ಟ್‌ ಸಲ್ಲಿಸಬೇಕು ಅಂತ ಆದೇಶ ಹೊರಡಿಸಿದೆ. ಇನ್ನು ಇವತ್ತು ಸಿಧು ಮೂಸೆವಾಲರ ಅಂತ್ಯ ಸಂಸ್ಕಾರ ಪಂಜಾಬ್‌ನ ಅವ್ರ ಸ್ವಗ್ರಾಮದಲ್ಲಿ ನೆರವೇರಿದ. ಈ ವೇಳೆ ಅವ್ರ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ಗಾಯಕನನ್ನ ಕೊನೆ ಬಾರಿಗೆ ಕಣ್ತುಂಬಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply