ಆರ್​​​​ಬಿಐ ಜೆನರಲ್ ಮ್ಯಾನೇಜರ್ ಆತ್ಮಹತ್ಯೆ..!

ಭಾರತೀಯ ರಿಜರ್ವ್​ ಬ್ಯಾಂಕ್​​​ನ ಗುವಾಹಟಿ ಬ್ರಾಂಚ್​​ನ ಜನರಲ್ ಮ್ಯಾನೇಜರ್ ಒಡಿಶಾದ ಜೈಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಂಡಿಕೋಲಾದ ಹೋಟೆಲೊಂದರಲ್ಲಿ ನಿನ್ನೆ ಈ ಘಟನೆ ನಡೆದಿದ್ದು, ಮೃತನನ್ನು ಆಶಿಷ್ ರಂಜನ್ ಸಮಾಲ್ ಎಂದು ಗುರುತಿಸಲಾಗಿದೆ. ಅಲ್ಲದೆ ಜೈಪುರದ ನರಹರಿಪುರ ಮೂಲದವರಾಗಿದ್ದ ಇವರು ಅಸ್ಸಾಂನ ಹುವಾಹಟಿ ಬ್ರಾಂಚ್​ನಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ತಾಯಿಯನ್ನು ಭೇಟಿಯಾಗಲು ಗುರುವಾಗ ತಮ್ಮ ಗ್ರಾಮಕ್ಕೆ ಹೋಗಿದ್ದ ಆಶಿಷ್​​, ನಂತರ ಭುವನೇಶ್ವರಕ್ಕೆ ಬಂದು ತಮ್ಮ ಪತ್ನಿ ಮತ್ತು ಮಗನನ್ನು ಭೇಟಿಯಾಗಿದ್ದರು. ಪತ್ನಿ ಕಳಿಂಗ ಇನ್​​ಸ್ಟಿಟ್ಯೂಟ್​​​​ ಆಫ್ ಮೆಡಿಕಲ್ ಸೈನ್ಸ್​ನಲ್ಲಿ ಕೆಲಸ ಮಾಡುತ್ತಿದ್ದು, ಪುತ್ರ ದ್ವಿತೀಯ ಪಿಯುಸಿ ಓದುತ್ತಿದ್ದ. ಗುರುವಾರ ಮಧ್ಯಾಹ್ನ ಹೋಟೆಲ್​​ನ ರೂಮಿಗೆ ಬಂದಿದ್ದ ಆಶಿಷ್​​​, ಶುಕ್ರವಾರ ಬೆಳಗ್ಗೆ ಬಾಗಿಲು ತೆರೆಯಲೇ ಇಲ್ಲ. ಹೀಗಾಗಿ ಪೊಲೀಸ್ ಸಿಬ್ಬಂದಿ ಪೊಲೀಸರನ್ನು ಕರೆದು, ಬಾಗಿಲು ತೆರೆದಿದ್ದಾರೆ. ಈ ವೇಳೆ ಆಶಿಷ್​​ ಫ್ಯಾನ್​​​​ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದು ಗೊತ್ತಾಗಿದೆ.

Contact Us for Advertisement

Leave a Reply