ಭಾರತೀಯ ರಿಜರ್ವ್ ಬ್ಯಾಂಕ್ನ ಗುವಾಹಟಿ ಬ್ರಾಂಚ್ನ ಜನರಲ್ ಮ್ಯಾನೇಜರ್ ಒಡಿಶಾದ ಜೈಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಂಡಿಕೋಲಾದ ಹೋಟೆಲೊಂದರಲ್ಲಿ ನಿನ್ನೆ ಈ ಘಟನೆ ನಡೆದಿದ್ದು, ಮೃತನನ್ನು ಆಶಿಷ್ ರಂಜನ್ ಸಮಾಲ್ ಎಂದು ಗುರುತಿಸಲಾಗಿದೆ. ಅಲ್ಲದೆ ಜೈಪುರದ ನರಹರಿಪುರ ಮೂಲದವರಾಗಿದ್ದ ಇವರು ಅಸ್ಸಾಂನ ಹುವಾಹಟಿ ಬ್ರಾಂಚ್ನಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ತಾಯಿಯನ್ನು ಭೇಟಿಯಾಗಲು ಗುರುವಾಗ ತಮ್ಮ ಗ್ರಾಮಕ್ಕೆ ಹೋಗಿದ್ದ ಆಶಿಷ್, ನಂತರ ಭುವನೇಶ್ವರಕ್ಕೆ ಬಂದು ತಮ್ಮ ಪತ್ನಿ ಮತ್ತು ಮಗನನ್ನು ಭೇಟಿಯಾಗಿದ್ದರು. ಪತ್ನಿ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ಕೆಲಸ ಮಾಡುತ್ತಿದ್ದು, ಪುತ್ರ ದ್ವಿತೀಯ ಪಿಯುಸಿ ಓದುತ್ತಿದ್ದ. ಗುರುವಾರ ಮಧ್ಯಾಹ್ನ ಹೋಟೆಲ್ನ ರೂಮಿಗೆ ಬಂದಿದ್ದ ಆಶಿಷ್, ಶುಕ್ರವಾರ ಬೆಳಗ್ಗೆ ಬಾಗಿಲು ತೆರೆಯಲೇ ಇಲ್ಲ. ಹೀಗಾಗಿ ಪೊಲೀಸ್ ಸಿಬ್ಬಂದಿ ಪೊಲೀಸರನ್ನು ಕರೆದು, ಬಾಗಿಲು ತೆರೆದಿದ್ದಾರೆ. ಈ ವೇಳೆ ಆಶಿಷ್ ಫ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದು ಗೊತ್ತಾಗಿದೆ.
Contact Us for Advertisement2019-10-26