ಅರ್ಜುನನ ಸಮಾಧಿ ಬೇಲಿ ಕಿತ್ತೆಸೆದ ಕಾಡಾನೆಗಳು!

masthmagaa.com:

ಕಳೆದ ತಿಂಗಳು ಕ್ಯಾಪ್ಟನ್ ಅರ್ಜುನ ಆನೆ ಮೃತಪಟ್ಟ ಬಳಿಕ ಆತನನ್ನ ಹಾಸನದ ಸಕಲೇಶಪುರ ಬಳಿಯ ದಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ಮಣ್ಣು ಮಾಡಲಾಗಿತ್ತು. ಈಗ ಕಾಡಾನೆಗಳ ಹಿಂಡು ಅರ್ಜುನನ ಸಮಾಧಿ ಸುತ್ತ ಕಟ್ಟಿದ್ದ ತಂತಿ ಬೇಲಿಯನ್ನು ಕಿತ್ತೆಸೆದು‌, ಸಾಮಾಧಿ ಮೇಲೆ ಓಡಾಡಿ ದಾಂಧಲೆ ನಡೆಸಿವೆ. ಬಹುಶಃ ಅಲ್ಲಿ ತಿನ್ನೋಕೆ ಏನಾದ್ರೂ ಸಿಗಬಹುದು ಅಂತ ಆನೆಗಳಿಗೆ ಅನ್ಸಿರ್ಬೋದು. ಅಲ್ಲದೆ ಕಾಡಿನ ಮಧ್ಯೆ ಬಣ್ಣ ಬಣ್ಣದ ಹೂವು, ಧ್ವಜಗಳನ್ನ ಕಂಡ ಆನೆಗಳಿಗೆ ಕುತೂಹಲ ಮೂಡೋದು ಸಾಮಾನ್ಯ.

-masthmagaa.com

Contact Us for Advertisement

Leave a Reply