masthmagaa.com:
ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುಂಡಿರೋ ಬೆನ್ನಲ್ಲೇ ಇದೀಗ ಮಧ್ಯ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಕಮಲನಾಥ್ ತಮ್ಮ ಸ್ಥಾನದಿಂದ ಕೆಳಗಿಳಿಯೋಕೆ ಮುಂದಾಗಿದ್ದಾರೆ. ಕೆಲ ಮಾಧ್ಯಮ ವರದಿ ಪ್ರಕಾರ, ನೆನ್ನೆ ಅಂದ್ರೆ ಡಿಸೆಂಬರ್ 5 ರಂದು ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವ್ರನ್ನ ಕಮಲನಾಥ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕಮಲನಾಥ್ ಅವ್ರಿಗೆ ಮಧ್ಯ ಪ್ರದೇಶದ ನೂತನ ಅಧ್ಯಕ್ಷರ ನೇಮಿಸೋಕೆ ನಿರ್ದೇಶಿಸಲಾಗಿದೆ ಅಂತ ಹೇಳಲಾಗಿದೆ. ಅಂದ್ಹಾಗೆ ಪಂಚರಾಜ್ಯ ಚುನಾವಣೆಯ ರಿಸಲ್ಟ್ ಡಿಸೆಂಬರ್ 3 ರಂದು ಅನೌನ್ಸ್ ಆಗಿತ್ತು.
-masthmagaa.com
Contact Us for Advertisement