masthmagaa.com:
ಕಂಗಾನಾ ರಣಾವತ್ ಹರಿದ್ವಾರಕ್ಕೆ ಹೋಗಿದ್ದಾರೆ. ಹರಿದ್ವಾರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಕಂಗನಾ ಸಲಿಂಗ ವಿವಾಹದ ಬಗ್ಗೆಯೂ ಮಾತನಾಡಿದ್ದಾರೆ. ಸಲಿಂಗ ವಿವಾಹಕ್ಕೆ ಒಪ್ಪಿಗೆ ಕೊಡಿ ಅಂತ ಸುಪ್ರಿಂ ಕೋರ್ಟ್ಗೆ ಕೆಲವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ಬೆನ್ನಲ್ಲೇ ಕಂಗನಾ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ.
“ಮದುವೆ ಅನ್ನೋದು ಹೃದಯಕ್ಕೆ ಸಂಬಂಧ ಪಟ್ಟ ವಿಷಯ. ಜನ್ರಿಗೆ ಏನ್ ಬೇಕು ಅಂತ ಕೇಳೋದಲ್ಲ, ನಮಗೆ ಇಷ್ಟ ಆದವರ ಜೊತೆ ನಾವು ಮದುವೆಯಾಗಬಹುದು.” ಅಂತ ತಮ್ಮ ಅಭಿಪ್ರಾಯವನ್ನ ಮಾಧ್ಯಮದ ಜೊತೆ ಹಂಚಿಕೊಂಡಿದ್ದಾರೆ.
ಈ ಹಿಂದೆಯೂ ಕೂಡ ಕಂಗನಾ ಟ್ವೀಟ್ ಮಾಡಿ ಸಲಿಂಗ ವಿವಾಹದ ಬಗ್ಗೆ ಮಾತನಾಡಿದ್ರು. “ನೀವು ಮಹಿಳೆಯಾಗಿರಿ, ಪುರುಷರಾಗಿರಿ, ಯಾವುದೂ ಕೂಡ ಮ್ಯಾಟರ್ ಆಗೋದಿಲ್ಲ. ದಯವಿಟ್ಟು ಎಲ್ಲರೂ ಅರ್ಥ ಮಾಡ್ಕೊಳ್ಳಿ. ಜಗತ್ತಿನಲ್ಲಿ ನೀವು ಏನ್ ಸಾಧನೆ ಮಾಡ್ತಾ ಇದ್ರಿ ಅಂತ ಅಷ್ಟೆ ಕೌಂಟ್ ಆಗತ್ತೆ. ನೀವು ಬೆಡ್ ಅಲ್ಲಿ ಏನ್ ಮಾಡ್ತೀರಿ ಅನ್ನೋದಲ್ಲ.” ಅಂತ ಹೇಳಿದ್ರು.
ಇನ್ನು ಕಂಗನಾ ನಿನ್ನೆ ಮಾತನಾಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೆಲವರು ಪಾಸಿಟೀವ್ ರಿಪ್ಲೈ ಕೊಟ್ರೆ ಕೆಲವರು ನೆಗೆಟೀವ್ ರಿಪ್ಲೈ ಕೊಟ್ಟಿದ್ದಾರೆ. “ನಾನು ಕಂಗನಾ ಅವರ ಅಭಿಮಾನಿ ಅಲ್ಲ, ಆದರೂ ಸಹ ಈ ವಿಷಯದಲ್ಲಿ ಕಂಗನಾ ಅವರನ್ನ ಪ್ರಶಂಶಿಸುತ್ತೇನೆ, ಸಾರ್ವಜಕನಿಕವಾಗಿ ತನ್ನ ಬೆಂಬಲವನ್ನ ಒಪನ್ ಆಗಿ ಹೇಳುವ ಸೆಲೆಬ್ರಿಟಿಗಳಲ್ಲಿ ಕಂಗನಾ ಕೂಡ ಒಬ್ರು” ಅಂತ ನೆಟ್ಟಿಗರೊಬ್ರು ಕಾಮೆಂಟ್ ಮಾಡಿದ್ದಾರೆ.
-masthmagaa.com
Contact Us for Advertisement