“ತಪ್ಪು ಮಾತಾಡೋಕೆ ಕಂಗನಾ ರಣಾವತ್‌ ಹೆಸರುವಾಸಿ” : ಆಲಿಯಾ ಸಿದ್ದಿಕಿ!

masthmagaa.com:

ಬಿಗ್‌ಬಾಸ್‌ OTT ಸೀಸನ್‌ 2 ರಲ್ಲಿ ಭಾಗವಹಿಸಿ ಆಲಿಯಾ ಸಿದ್ದಿಕಿ ಅವರ ಹೊರ ಬಂದಿದ್ದಾರೆ. ಹೊರ ಬಂದಿದ್ದಕ್ಕೆ ಸಲ್ಮಾನ್‌ ಖಾನ್‌ ಕಾರಣ, ಪಕ್ಷಪಾತ ಮಾಡ್ತಾರೆ ಅಂತ ಹೇಳಿಕೆ ಕೊಟ್ಟಿದ್ರು. ಈಗ “ಕಂಗನಾ ರಣಾವತ್‌ ಎಲ್ಲರ ವಿಷಯಕ್ಕೆ ಮೂಗು ತೂರಿಸ್ತಾರೆ” ಅಂತ ಖಾರವಾಗಿ ಹೇಳಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆ ಆಲಿಯಾ ಸಿದ್ದಿಕಿ ಮತ್ತು ನವಾಜುದ್ದೀನ್‌ ಸಿದ್ದಿಕಿ ತಮ್ಮ ವೈಯಕ್ತಿಯ ವಿಚಾರಕ್ಕೆ ಸಂಬಂಧಸಿ ಸುದ್ದಿಯಾಗಿದ್ರು. ಇವರಿಬ್ಬರ ನಡುವೆ ಮನಸ್ತಾಪ ಇರೋದು ಮಾಧ್ಯಮದ ಮುಂದೆ ಜಗ್ಗಜ್ಜಾಹೀರಾತಾಗಿತ್ತು. ಇಷ್ಟೆಲ್ಲಾ ಆಗ್ತಾ ಇರುವಾಗ ಕಂಗನಾ ನಿರಂತರವಾಗಿ ನವಾಜುದ್ದೀನ್‌ಗೆ ಬೆಂಬಲ ಕೊಡ್ತಿದ್ರು. “ನಾನು ಕಂಗನಾ ಬಗ್ಗೆ ಗಮನಹರಿಸೋದಿಲ್ಲ, ಯಾಕಂದ್ರೆ ಅವಳು ಎಲ್ಲರ ವಿಷಯಕ್ಕೂ ಮೂಗು ತೂರಿಸ್ತಾಳೆ. ಹಾಗಾಗಿ ಅವರ ಮಾತಿಗೆ ಬೆಲೆ ಇಲ್ಲದಂತಾಗಿದೆ. ಟಿಕು ವೆಡ್ಸ್ ಶೇರು ಮೂವಿಯನ್ನ ಕಂಗನಾ ನಿರ್ಮಾಣ ಮಾಡಿದ್ದಾರೆ. ಅದರಲ್ಲಿ ನವಾಜುದ್ದೀನ್‌ ಸಿದ್ದಿಕಿ ಆಕ್ಟ್‌ ಮಾಡಿದ್ದಾರೆ. ತಮ್ಮ ಸಿನಿಮಾಗೆ ತೊಂದರೆ ಆಗತ್ತೆ ಅನ್ನೋ ಕಾರಣಕ್ಕೆ ಕಂಗನಾ ಅಲ್ಲಿಂದ ಇಲ್ಲಿಯ ತನಕ ಬರೀ ನವಾಜುದ್ದೀನ್‌ಗೆ ಸಪೋರ್ಟ್‌ ಮಾಡಿಕೊಂಡು ಬಂದಿದ್ದಾರೆ. ತಪ್ಪು ಮಾತಾಡೋದಕ್ಕೆ ಕಂಗನಾ ಹೆಸರುವಾಸಿ” ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply