ಪಕ್ಷಾಂತರ ಪರ್ವ: ಬಿಜೆಪಿ ಮತ್ತೊಂದು ವಿಕೆಟ್‌ ಪತನ

masthmagaa.com:

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ಪಕ್ಷಾಂತರ ಸಹ ಜೋರಾಗಿದೆ. ಈಗಾಗಲೇ ಜೆಪಿಪಿಯ ಇಬ್ಬರು ಹಾಲಿ ವಿಧಾನಪರಿಷತ್ ಸದಸ್ಯರು ಹಾಗೂ ಓರ್ವ ಶಾಸಕ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿಯ ಮತ್ತೊಂದು ವಿಕೆಟ್‌ ಪತನವಾಗಿದೆ. ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಆಕಾಂಕ್ಷಿಯಾಗಿರೊ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡೋದಾಗಿ ಹೇಳಿದ್ದಾರೆ. ಆದ್ರೆ ಯಾವ ಪಕ್ಷಕ್ಕೆ ಸೇರ್ತಾರೆ ಅನ್ನೊದನ್ನ ಹೇಳಿಲ್ಲ.ಇದರ ನಡುವೆ ಶಿವಮೊಗ್ಗ ನಗರದ ಟಿಕೆಟ್‌ನ್ನ ಈಶ್ವರಪ್ಪ ಅವ್ರಿಗೂ ಕೊಡದೆ ಇರಲು ಬಿಜೆಪಿ ನಿರ್ಧರಿಸಿದೆ ಅಂತ ಹೇಳಲಾಗ್ತಿದ್ದು, ಈಶ್ವರಪ್ಪ ತಮ್ಮ ಪುತ್ರ ಕಾಂತೇಶ್‌ಗೆ ಟಿಕೆಟ್‌ ಕೊಡುವಂತೆ ಲಾಬಿ ನಡೆಸಿದ್ದಾರೆ ಅಂತ ಸುದ್ದಿ ಕೇಳಿ ಬಂದಿದೆ.

-masthmagaa.com

Contact Us for Advertisement

Leave a Reply