ಗಣರಾಜ್ಯೋತ್ಸವ ಪರೇಡ್‌ಗೆ ಬನ್ನಿ ಅಂತ ಕುಂದಾಪುರದ ಚಮ್ಮಾರನಿಗೆ ಆಹ್ವಾನ ಕಳಿಸಿದ ಮೋದಿ!

masthmagaa.com:

ಈ ಬಾರಿಯ ಗಣರಾಜ್ಯೋತ್ಸವಕ್ಕೆ ರಾಜ್ಯದ ಸಾಮಾನ್ಯ ವ್ಯಕ್ತಿಯೊಬ್ಬರಿಗೆ ಆಹ್ವಾನ ಸಿಕ್ಕಿದೆ. ಕುಂದಾಪುರ ನಗರದ ಶಾಸ್ತ್ರಿ ಸರ್ಕಲ್‌ನಲ್ಲಿ ಪಾದರಕ್ಷೆಗಳನ್ನ ರಿಪೇರಿ ಮಾಡೊ ಕೆಲಸ ಮಾಡುವ ಮಣಿಕಂಠ ಅನ್ನೋ ವ್ಯಕ್ತಿಗೆ ದೆಹಲಿಯಿಂದ ಕರೆ ಬಂದಿದೆ. ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ಫಲಾನುಭವಿಯಾಗಿರೋ ಕಾರಣಕ್ಕೆ ಮಣಿಕಂಠ ಅವರಿಗೆ ಆಹ್ವಾನ ನೀಡಲಾಗಿದೆ. ಈ ಬಗ್ಗೆ ಮಾತಾಡಿರೋ ಮಣಿಕಂಠ, “ವಿಮಾನದಲ್ಲಿ ಪ್ರಯಾಣ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ಬಹಳ ಖುಷಿಯಾಗಿದೆ. ನನ್ನಂತ ಸಾಮಾನ್ಯ ಚಮ್ಮಾರನಿಗೆ ದೆಹಲಿಯಲ್ಲಿ ನಡೆಯೋ ಗಣರಾಜ್ಯೋತ್ಸವದ ಕಾರ್ಯಕ್ರಮ ನೋಡಲು ಆಹ್ವಾನ ಬಂದಿರೋದು ಬಹಳ ಸಂತೋಷದ, ವಿಶೇಷವಾದ ವಿಚಾರ. ಇದು ವರೆಗೆ ನಾನು TVಯಲ್ಲಿ ಮಾತ್ರ ಪರೇಡ್ ನೋಡಿದ್ದೆ. ಈಗ ಅಲ್ಲೇ ಹೋಗಿ ನೋಡುವ ಕ್ಷಣಕ್ಕೆ ಎದುರು ನೋಡ್ತಿದ್ದೇನೆ” ಅಂದಿದ್ದಾರೆ. ಅಂದ್ಹಾಗೆ ಕುಂದಾಪುರ ಮುನ್ಸಿಪಾಲ್ಟಿಯ ಅಧಿಕಾರಿಗಳು ಮಣಿಕಂಠ ಅವರಿಗೆ ಫ್ಲೈಟ್‌ನಲ್ಲಿ ಹೋಗಿಬರುವ ವ್ಯವಸ್ಥೆ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply