masthmagaa.com:
ರಾಜ್ಯದಲ್ಲಿ ಲಾಕ್ಡೌನ್ ಎಲ್ಲಾ ಜಾರಿ ಮಾಡಲ್ಲ, ಅದೆಲ್ಲಾ ಹಳೇ ಕಾನ್ಸೆಪ್ಟ್ ಅಂತ ಇತ್ತೀಚೆಗಷ್ಟೇ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ರು. ಆದ್ರೆ ಗೃಹ ಸಚಿವ ಆರಗ ಜ್ಞಾನೇಂದ್ರ ಬೇರೆನೇ ಹೇಳಿದ್ದಾರೆ. ಲಾಕ್ಡೌನ್ ಮಾಡೋದು ನಮ್ಮ ಬಳಿ ಇರೋ ಕೊನೇ ಅಸ್ತ್ರ. ಸದ್ಯಕ್ಕೆ ಅಂಥಾ ಪರಿಸ್ಥಿತಿ ಇಲ್ಲ. ಕೊರೋನಾ ಕೇಸ್ ಹೆಚ್ಚಾದ್ರೆ, ಸಾವು ನೋವು ಹೆಚ್ಚಾದ್ರೆ ಲಾಕ್ಡೌನ್ ಬರಬಹುದು ಎಂದಿದ್ದಾರೆ. ಈ ನಡುವೆ ಕೊರೋನಾ ಹೆಚ್ತಿರೋದ್ರಿಂದ ಬೆಂಗಳೂರಿನಲ್ಲಿ 1 ರಿಂದ 9ನೇ ತರಗತಿಯವರಿಗೆ ಜನವರಿ 31ರವರೆಗೆ ರಜೆಯನ್ನ ವಿಸ್ತರಿಸಲಾಗಿದೆ ಅಂತ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ. ಈ ಹಿಂದೆ ಜನವರಿ 19ರವರೆಗೆ ಮಾತ್ರ ಶಾಲೆಗಳಿಗೆ ರಜೆ ನೀಡಲಾಗಿತ್ತು.
-masthmagaa.com
Contact Us for Advertisement