ಮತ್ತೆ ಲಾಕ್​ಡೌನ್: ಗೃಹಸಚಿವ ಅರಗ ಜ್ಞಾನೇಂದ್ರ ಹೇಳಿದ್ದೇನು?

masthmagaa.com:

ರಾಜ್ಯದಲ್ಲಿ ಲಾಕ್​ಡೌನ್​ ಎಲ್ಲಾ ಜಾರಿ ಮಾಡಲ್ಲ, ಅದೆಲ್ಲಾ ಹಳೇ ಕಾನ್ಸೆಪ್ಟ್ ಅಂತ ಇತ್ತೀಚೆಗಷ್ಟೇ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ರು. ಆದ್ರೆ ಗೃಹ ಸಚಿವ ಆರಗ ಜ್ಞಾನೇಂದ್ರ ಬೇರೆನೇ ಹೇಳಿದ್ದಾರೆ. ಲಾಕ್​ಡೌನ್​ ಮಾಡೋದು ನಮ್ಮ ಬಳಿ ಇರೋ ಕೊನೇ ಅಸ್ತ್ರ. ಸದ್ಯಕ್ಕೆ ಅಂಥಾ ಪರಿಸ್ಥಿತಿ ಇಲ್ಲ. ಕೊರೋನಾ ಕೇಸ್​ ಹೆಚ್ಚಾದ್ರೆ, ಸಾವು ನೋವು ಹೆಚ್ಚಾದ್ರೆ ಲಾಕ್​ಡೌನ್​ ಬರಬಹುದು ಎಂದಿದ್ದಾರೆ. ಈ ನಡುವೆ ಕೊರೋನಾ ಹೆಚ್ತಿರೋದ್ರಿಂದ ಬೆಂಗಳೂರಿನಲ್ಲಿ 1 ರಿಂದ 9ನೇ ತರಗತಿಯವರಿಗೆ ಜನವರಿ 31ರವರೆಗೆ ರಜೆಯನ್ನ ವಿಸ್ತರಿಸಲಾಗಿದೆ ಅಂತ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ತಿಳಿಸಿದ್ದಾರೆ. ಈ ಹಿಂದೆ ಜನವರಿ 19ರವರೆಗೆ ಮಾತ್ರ ಶಾಲೆಗಳಿಗೆ ರಜೆ ನೀಡಲಾಗಿತ್ತು.

-masthmagaa.com

Contact Us for Advertisement

Leave a Reply