masthmagaa.com:
ವಿಧಾನಸಭಾ ಚುನಾವಣೆ ಹತ್ತಿರ ಬರ್ತಿದ್ದಂತೆ ಸಿನಿಮಾ ಕಲಾವಿದರಿಗೆ ಮಣೆ ಹಾಕೋಕೆ ರಾಜಕೀಯ ಪಕ್ಷಗಳು ಮುಂದಾಗಿವೆ. ಇದೀಗ ನಟ ಕಿಚ್ಚ ಸುದೀಪ್ ಅವರನ್ನ ರಾಜ್ಯ ಬಿಜೆಪಿ ಸೆಳೆಯೋಕೆ ನೋಡ್ತಿದೆ ಅನ್ನೋ ಮಾತುಕೇಳಿ ಬರ್ತಿದೆ. ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಜೊತೆ ಸುದೀಪ್ ಮಾತುಕತೆ ನಡೆಸಿದ್ದಾರೆ ಅಂತ ಹೇಳಲಾಗಿದೆ. ಸುದೀಪ್ ನೇರವಾಗಿ ರಾಜಕೀಯಕ್ಕೆ ಧುಮುಕುತ್ತಾರಾ ಅಥ್ವಾ ಕೇವಲ ಬಿಜೆಪಿ ಪರ ಪ್ರಚಾರ ಮಾಡ್ತಾರಾ ಅನ್ನೊದು ಇದೇ ಏಪ್ರಿಲ್ 5 ರಂದು ರಿವೀಲ್ ಆಗಲಿದೆ ಅಂತ ಕೂಡ ಹೇಳಲಾಗ್ತಿದೆ. ಆದ್ರೆ ಈ ಸುದ್ದಿಗೆಲ್ಲಾ ಕಿಚ್ಚ ಇನ್ನೂ ಕೂಡ ಉತ್ತರ ಕೊಟ್ಟಿಲ್ಲ.
-masthmagaa.com
Contact Us for Advertisement