ಉಗ್ರರಿಗೆ ಹೆದರಿ ಜಮ್ಮು ಕಾಶ್ಮೀರದಿಂದ ಹೊರಬರ್ತಿರೋ ಜನ!

masthmagaa.com:

ಜಮ್ಮು ಕಾಶ್ಮೀರದಲ್ಲಿ ನಾಗರಿಕರನ್ನ, ಹೊರಗಿನವರನ್ನ ಟಾರ್ಗೆಟ್​ ಮಾಡಿ ಹತ್ಯೆ ಮಾಡ್ತಿರೋ ವಿಚಾರ ಅಲ್ಲಿ ನೆಲೆಸಿರೋ ನಾನ್​-ಕಾಶ್ಮೀರಿಗಳಲ್ಲಿ ಭಾರಿ ಆತಂಕ ಮೂಡಿಸಿದೆ. ಜೀವ ಭಯದಲ್ಲಿ ಹಲವರು ಜಮ್ಮು ಕಾಶ್ಮೀರ ಬಿಟ್ಟು ಹೊರ ಬರ್ತಿದ್ದಾರೆ. ರಾಜಸ್ಥಾನದ ಮೂಲದ ವಲಸೆ ಕಾರ್ಮಿಕರ ಗುಂಪೊಂದು ಇವತ್ತು ಶ್ರೀನಗರದಿಂದ ತವರು ರಾಜ್ಯಕ್ಕೆ ವಾಪಸ್​ ಹೊರಟಿದೆ. ಈ ವೇಳೆ ಮಾತನಾಡಿದ ವಲಸೆ ಕಾರ್ಮಿಕನೊಬ್ಬ, ಇಲ್ಲಿ ಪರಿಸ್ಥಿತಿ ತುಂಬಾ ಬಿಗಡಾಯಿಸ್ತಿದೆ. ನಮ್ಗೆ ಹೆದರಿಕೆ ಆಗ್ತಿದೆ. ನಮ್ಮ ಜೊತೆ ಮಕ್ಕಳಿದ್ದಾರೆ. ಹೀಗಾಗಿ ವಾಪಸ್​ ಹೋಗ್ತಿದ್ದೀವಿ ಎಂದಿದ್ದಾರೆ.

-masthmagaa.com

Contact Us for Advertisement

Leave a Reply