ಕೋಲಾರ ಕಾಂಗ್ರೆಸ್‌ನಲ್ಲಿ ಬಂಡಾಯ: ಸಚಿವರ ಅಳಿಯನಿಗೆ ವಿರೋಧ!

masthmagaa.com:

ಲೋಕಸಭೆ ಚುನಾವಣೆ ಸಂಬಂಧ ಕೋಲಾರದಲ್ಲಿ ಸಚಿವ ಕೆ.ಎಚ್ ಮುನಿಯಪ್ಪ ಅವ್ರ ಅಳಿಯ ಕೆ.ಜಿ. ಚಿಕ್ಕ ಪೆದ್ದ‍‍‍‍‍ಣ್ಣನಿಗೆ ಕಾಂಗ್ರೆಸ್‌ ಟಿಕೆಟ್‌ ನೀಡೋ ವಿಚಾರವಾಗಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ವಿಚಾರವಾಗಿ ಇಬ್ಬರು MLC ಗಳಾದ ನಜೀರ್‌ ಅಹ್ಮದ್‌, ಅನಿಲ್‌ ಕುಮಾರ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡೊಕೆ ಮುಂದಾಗಿದ್ದಾರೆ. ಇದಲ್ಲದೆ ಸಚಿವ ಎಂ.ಸಿ ಸುಧಾಕರ್‌ ಸೇರಿ ಕೋಲಾರದ ಐವರು ಕೈ ಶಾಸಕರೂ ಕೂಡ ರಾಜೀನಾಮೆ ನೀಡೊದಾಗಿ ಪಕ್ಷದ ವರಿಷ್ಠರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

-masthm

Contact Us for Advertisement

Leave a Reply