ಲಖೀಂಪುರ್​​ಖೇರಿ ಕೇಸ್​: ಮಗ ಮಾಡಿದ ತಪ್ಪಿಗೆ ಅಪ್ಪನಿಗೇಕೆ ಶಿಕ್ಷೆ! ಬಿಜೆಪಿ ಚಿಂತನೆ

masthmagaa.com:
ಲಖೀಂಪುರ್​​​ಖೇರಿ ಹಿಂಸಾಚಾರ ಫುಲ್ ಪ್ಲಾನ್ ಮಾಡ್ಕೊಂಡು ಮಾಡಲಾಗಿತ್ತು ಅಂತ ಎಸ್​ಐಟಿ ಹೇಳಿದ ಬೆನ್ನಲ್ಲೇ ಈಗ ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ​​ ರಾಜೀನಾಮೆ ನೀಡಬೇಕು ಅನ್ನೋ ಕೂಗು ಜೋರಾಗಿದೆ. ಇತ್ತು ಸಂಸತ್​​ನಲ್ಲೂ ಪ್ರತಿಪಕ್ಷಗಳು ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟಿಸಿದ್ವು. ಆದ್ರೆ ಮಗ ಮಾಡಿದ ತಪ್ಪಿಗೆ ತಂದೆಗೆ ಯಾಕೆ ಶಿಕ್ಷೆ ಕೊಡಬೇಕು ಅಂತ ಬಿಜೆಪಿ ಚಿಂತನೆ ನಡೆಸ್ತಿದೆಯಂತೆ. ಜೊತೆಗೆ UP ಎಲೆಕ್ಷನ್ ಟೈಮಲ್ಲಿ, ಯುಪಿ ಮೂಲದ ಕೇಂದ್ರ ಸಚಿವರೊಬ್ಬರು ಇಂಥಾ ಕೇಸಲ್ಲಿ ರಾಜಿನಾಮೆಕೊಟ್ಟರೆ ಬಹಳ ದೊಡ್ಡ ಹೊಡೆತ ಬೀಳುತ್ತೆ. ಹೀಗಾಗಿ ಅಜಯ್ ಕುಮಾರ್ ಮಿಶ್ರಾರನ್ನು ಸಂಪುಟದಿಂದ ತೆಗೆದುಹಾಕುವ ಪ್ರಸ್ತಾವನೆ ಬಿಜೆಪಿ ಹಿರಿಯ ನಾಯಕರ ಮುಂದಿಲ್ಲ ಅಂತ ಮೂಲಗಳು ತಿಳಿಸಿವೆ.
-masthmagaa.com

Contact Us for Advertisement

Leave a Reply