ಕಲಬುರ್ಗಿಯಲ್ಲಿ ವಕೀಲನ ಬರ್ಬರ ಹತ್ಯೆ!

masthmagaa.com:

ಕೋರ್ಟ್‌ಗೆ ಹೋಗೊ ವೇಳೆ ವಕೀಲನೊಬ್ಬನ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕಲಬುರ್ಗಿಯ ಸಾಯಿ ಮಂದಿರ ಬಳಿ ನಡೆದಿದೆ. ಮೃತ ವಕೀಲನನ್ನ ಈರಣಗೌಡ ಪಾಟೀಲ್‌ ಅಂತ ಗುರುತಿಸಲಾಗಿದೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸಂಬಂಧಿಕರೇ ಹತ್ಯೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಹತ್ಯೆಗೈದ ಆರೋಪಿಯನ್ನ ಬಂಧಿಸುವಂತೆ ಜಿಲ್ಲಾ ವಕೀಲರ ಸಂಘದಿಂದ ನಗರದ ಎಸ್.ಪಿ.ವಿ ಸರ್ಕಲ್‌ ಬಳಿ ಬೃಹತ್‌ ಪ್ರತಿಭಟನೆ ನಡೆಸಲಾಗಿದೆ. ಈ ಕುರಿತು ವಿಶ್ವ ವಿದ್ಯಾಲಯ ಠಾಣೆ ಪೋಲಿಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

-masthmagaa.com

 

Contact Us for Advertisement

Leave a Reply