ಸೋಲು, ಗೆಲುವು…ಎರಡರಿಂದೆಲೂ ಕಲಿಯೋದು ತುಂಬಾ ಇದೆ!

masthmagaa.com:

ಇತ್ತೀಚೆಗೆ ನಡೆದ 4 ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು ಅಸ್ಸಾಂ ಮತ್ತು ಪುದುಚೆರಿಯಲ್ಲಿ ಮಾತ್ರ.. ದೊಡ್ಡ ದೊಡ್ಡ ರಾಜ್ಯಗಳಲ್ಲಿ ಶತಾಯ ಗತಾಯ ಯುದ್ಧ ಮಾಡಿದ್ರೂ ಗೆಲುವು ಸಾಧ್ಯವಾಗಿಲ್ಲ. ಅದ್ರ ಬೆನ್ನಲ್ಲೇ ಈಗ ಮುಂಬರುವ ಪಂಚರಾಜ್ಯಗಳ ಚುನಾವಣೆಗೆ ವೇದಿಕೆ ರೆಡಿ ಮಾಡ್ತಿದೆ. ಮುಂದಿನ ವರ್ಷ ಉತ್ತರ ಪ್ರದೇಶ, ಗೋವಾ, ಪಂಜಾಬ್, ಉತ್ತರಾಖಂಡ್ ಮತ್ತು ಮಣಿಪುರದಲ್ಲಿ ಚುನಾವಣೆ ನಡೆಯಲಿದ್ದು, ಇದ್ರಲ್ಲಿ ಉತ್ತರ ಪ್ರದೇಶ ತುಂಬಾ ಮುಖ್ಯವಾಗಿದೆ. ಈ ಚುನಾವಣೆಗಳ ಬಗ್ಗೆ ಪಕ್ಷದ ಪ್ರಧಾನಿ ಕಾರ್ಯದರ್ಶಿಗಳು ಪ್ರಧಾನಿ ಮೋದಿ ಜೊತೆ ನಿನ್ನೆ ಸಭೆ ನಡೆಸಿದ್ರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಗೆಲುವು ಮತ್ತು ಸೋಲು ಎರಡದಿಂದಲೂ ಪಾಠ ಕಲಿತುಕೊಂಡು ಮುಂದಿನ ಚುನಾವಣೆಗೆ ಸಿದ್ಧರಾಗಬೇಕು ಅಂತ ಕರೆಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply