masthmagaa.com:
ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ 26 ಮಂದಿ ಮಾವೋವಾದಿಗಳನ್ನು ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ. 11ಕ್ಕೂ ಹೆಚ್ಚು ಮಂದಿ ಮಾವೋವಾದಿಗಳು ಗಾಯಗೊಂಡಿದ್ದಾರೆ. ಗ್ಯಾರಾಬತ್ತಿ ಅರಣ್ಯ ಪ್ರದೇಶದಲ್ಲಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ರು. ಈ ವೇಳೆ ಮಾವೋವಾದಿಗಳು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಅದಕ್ಕೆ ಪೊಲೀಸರು ಪ್ರತಿದಾಳಿ ನಡೆಸಿದ್ದು, ಅದ್ರಲ್ಲಿ ನಾಲ್ವರು ಮಾವೋವಾದಿಗಳು ಪ್ರಾಣ ಕಳ್ಕೊಂಡಿದ್ದಾರೆ.
ನಿನ್ನೆಯಷ್ಟೇ ಜಾರ್ಖಂಡ್ನಲ್ಲಿ ಮಾವೋವಾದಿ ನಾಯಕ ಪ್ರಶಾಂತ್ ಬೋಸ್ ಅಲಿಯಾಸ್ ಕೃಷ್ಣದಾ ಎಂಬಾತನನ್ನು ಅರೆಸ್ಟ್ ಮಾಡಲಾಗಿತ್ತು. ಈತನ ತಲೆಗೆ ಪೊಲೀಸರು 1 ಕೋಟಿ ರೂಪಾಯಿ ಬಹುಮಾನ ಕೂಡ ಘೋಷಿಸಿದ್ರು. ಆದ್ರೀಗ ಪ್ರಶಾಂತ್ ಮತ್ತು ಆತನ ಪತ್ನಿ ಶೀಲಾ ಮರಾಂಡಿಯನ್ನು ಅರೆಸ್ಟ್ ಮಾಡಲಾಗಿದೆ. ಶೀಲಾ ಮರಾಂಡಿ ಕೂಡ ಸಿಪಿಐಎಂ ಅಂದ್ರೆ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾವೋಯಿಸ್ಟ್ ಪಕ್ಷದ ಸದಸ್ಯೆ ಅಂತ ಗೊತ್ತಾಗಿದೆ.
-masthmagaa.com
Contact Us for Advertisement