ಕೆನಡ: ಮಹಾತ್ಮ ಗಾಂಧಿ ಮೂರ್ತಿಯನ್ನ ವಿರೂಪಗೊಳಿಸಿದ ಖಲಿಸ್ತಾನಿ ಪ್ರತಿಭಟನಾಕಾರರು

masthmagaa.com:

ಖಲಿಸ್ತಾನಿ ನಾಯಕ ಅಮೃತ್‌ಪಾಲ್‌ ಬೆಂಬಲವಾಗಿ ವಿದೇಶಗಳಲ್ಲಿ ಖಲಿಸ್ತಾನಿ ಪರ ಜನರು ಇನ್ನು ಪ್ರತಿಭಟನೆ ಮಾಡ್ತಾನೇ ಇದಾರೆ. ಇದೀಗ ಕೆನಡದ ಒಂಟಾರಿಯೋ ಪ್ರಾಂತ್ಯದಲ್ಲಿ ಮಹಾತ್ಮ ಗಾಂಧೀಜಿ ಅವರ ಮೂರ್ತಿಯನ್ನ ಪ್ರತಿಭಟನಾಕಾರರು ವಿರೂಪಗೊಳಿಸಿದ್ದಾರೆ. ಭಾರತ ಸರ್ಕಾರ ಗಿಫ್ಟ್‌ ಆಗಿ ನೀಡಿದ್ದ 6 ಅಡಿ ಎತ್ತರದ ಮಹಾತ್ಮ ಗಾಂಧಿ ಮೂರ್ತಿ ಮೇಲೆ ಪ್ರಧಾನಿ ಮೋದಿ ವಿರುದ್ದ ಹಾಗೂ ಗಾಂಧಿ ವಿರುದ್ದ ಅವಹೇಳನಕಾರಿ ಹೇಳಿಕೆಗಳನ್ನ ಬರೆಯಲಾಗಿದೆ. ಹಾಗೂ ಸ್ಟಾಚ್ಯು ಮೇಲೆ ಖಲಿಸ್ತಾನಿ ಧ್ವಜವನ್ನ ಹಾರಿಸಿ ಖಲಿಸ್ತಾನಿ ಪ್ರತಿಭಟನಾಕಾರರು ಮೆರೆದಿದ್ದಾರೆ. ಈ ಬಗ್ಗೆ ದೂರು ದಾಖಲಿಸಿದ್ದು, ತನಿಖೆ ನಡೆಸಲಾಗ್ತಿದೆ ಅಂತ ಅಲ್ಲಿನ ಪೊಲೀಸರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply