masthmagaa.com:
ಕಂಗನಾ ರಣಾವತ್ ಸದ್ಯ ಬಾಲಿವುಡ್ ಬಗ್ಗೆ ಮತ್ತು ದಿ ಕೇರಳ ಸ್ಟೋರಿ ಸಿನಿಮಾ ಬಗ್ಗೆ ಮಾತನಾಡಿ ಸುದ್ದಿ ಆಗಿದ್ರು. ಆದ್ರೆ ಈ ಬಾರಿ ಸ್ವಚ್ಛತೆಯ ಪಾಠ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿ ಆಗಿದ್ದಾರೆ.
ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ನಲ್ಲಿ ಬಿದ್ದಿರುವ ಕಸದ ರಾಶಿಯ ವಿಡಿಯೋ ಶೇರ್ ಮಾಡಿ ಜನರಿಗೆ ಬುದ್ದಿ ಹೇಳಿದ್ದಾರೆ. “ಎವರೆಸ್ಟ್ ಪ್ರವಾಸವನ್ನ ಸ್ಟಾಪ್ ಮಾಡಿಸಿ , ಇಲ್ಲಾ ಅಂದ್ರೆ ಈ ಗಲೀಜನ್ನ ಕ್ಲೀನ್ ಮಾಡಿಸಿ, ದೇವರನ್ನ ಮೆಚ್ಚಿಸುವ ಭರದಲ್ಲಿ ನಾವು ನಮ್ಮ ಪ್ರಕೃತಿಯನ್ನ ಮರೀತಾ ಇದ್ದೇವೆ. ಒಂದು ಸಲ ರಿಯಾಲಿಟಿ ಏನು ಅಂತ ಚೆಕ್ ಮಾಡಿ. ಈ ವಿಡಿಯೋವನ್ನ ನೋಡಿ, ಮನುಷ್ಯ ದೇವರಿಗೆ ತುಂಬಾನೇ ಇಷ್ಟ ಅಂತ ನೀವು ಅಂದಕೊಳ್ಳಬಹುದು, ಆದರೆ ಇಲ್ಲಿ ಇಂತ ಮನುಷ್ಯರಿಂದ ಜಗತ್ತನ್ನ ಉಳಿಸಿ
” ಅಂತ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿ ಬರೆದುಕೊಂಡಿದ್ದಾರೆ.
-masthmagaa.com
Contact Us for Advertisement