masthmagaa.com:
ವ್ಯಕ್ತಿಯೊಬ್ಬ ತನ್ನ ಮೇಲೆ ದಾಳಿ ಮಾಡೋಕೆ ಬಂದ ಚಿರತೆಯೊಂದಿಗೆ ಹೋರಾಡಿ ಅದರ ಕೈಕಾಲು ಕಟ್ಟಿ ಬೈಕ್ ಹಿಂದೆ ಕಟ್ಕೊಂಡು ಅರಣ್ಯ ಇಲಾಖೆ ಕಚೇರಿಗೆ ತಂದಿರುವ ಘಟನೆ ಹಾಸನದಲ್ಲಿ ನಡೆದಿದೆ. ವೇಣುಗೋಪಾಲ್ ಅನ್ನೊ ಯುವಕ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಆತನ ಮೇಲೆ ಚಿರತೆ ದಾಳಿ ಮಾಡಿದ್ದು, ಈ ವೇಳೆ ಚಿರತೆ ಮೇಲೆ ಪ್ರತಿದಾಳಿ ಮಾಡಿದ ವೇಣುಗೋಪಾಲ್ ಅದನ್ನು ಮಣಿಸಿ ಅದರ ಕೈಕಾಲು ಕಟ್ಟಿದ್ದಾನೆ. ನಂತರ ಚಿರತೆಗೆ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾನೆ. ಅಂದ್ಹಾಗೆ ಈ ವೇಣುಗೋಪಾಲ್ ಚಿರತೆಯನ್ನ ಬೈಕ್ಗೆ ಕಟ್ಕೊಂಡ್ ಹೋಗ್ತಿರೋ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಆತನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಾಗ್ತಿದೆ.
-masthmagaa.com
Contact Us for Advertisement