ಮೋದಿ-ಸುಮಲತಾ ಭೇಟಿ: ಗುಂಡಿಕ್ಕಿ ಕೊಲ್ಲೊ ಕಾನೂನು ಜಾರಿಗೊಳ್ಸಿ!

masthmagaa.com:

ಪ್ರಧಾನಿ ಮೋದಿಗೆ ಹೇಳಿ.. ದೇಶ ವಿಭಜನೆ ಹೇಳಿಕೆಗೆ ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೊಳಿಸಲಿ ಅಂತ ಗೃಹ ಸಚಿವ ಜಿ.ಪರಮೇಶ್ವರ ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಸಂಸದ ಡಿ. ಕೆ ಸುರೇಶ್, ಶಾಸಕ ವಿನಯ್ ಕುಲಕರ್ಣಿ ಅವ್ರನ್ನ ಗುಂಡಿಕ್ಕಿ ಕೊಲ್ಬೇಕು ಅಂತ ಕೆ.ಎಸ್‌.ಈಶ್ವರಪ್ಪ ಹೇಳಿದ್ರು. ಈ ಬಗ್ಗೆ ರಿಯಾಕ್ಟ್‌ ಮಾಡಿರೋ ರಾಜ್ಯ ಗೃಹ ಸಚಿವ ಪರಮೇಶ್ವರ್, ಈಶ್ವರಪ್ಪರ ಈ ಹೇಳಿಕೆ ಬಗ್ಗೆ ಯಾರಾದ್ರು ದೂರು ನೀಡಿದ್ರೆ ಕೇಸ್‌ ದಾಖಲಿಸ್ತಿವಿ. ಕೇಂದ್ರದಲ್ಲಿ ಮೋದಿ ಹಾಗೂ ಅಮಿತ್ ಶಾಗೆ ಹೇಳಲಿ. ಅವರು ಕಾನೂನು ಜಾರಿಗೆ ತರಲಿ. ಆಗ ಅದು ಇಡೀ ದೇಶಕ್ಕೆ ಅನ್ವಯವಾಗುತ್ತೆ ಅಂತ ಟಾಂಗ್‌ ಕೊಟ್ಟಿದ್ದಾರೆ. ಇತ್ತ ಮಂಡ್ಯ ಲೋಕಸಭಾ ಕ್ಷೇತ್ರ ಬಿಜೆಪಿಗೋ ಜೆಡಿಎಸ್‌ಗೋ ಅಂತಿರೋ ಹೊತ್ತಲ್ಲೇ ಈಗ ಸಂಸದೆ ಸುಮಲತಾ ಪಿಎಂ ಮೋದಿ ಹಾಗೂ ಬಿಜೆಪಿ ಅದ್ಯಕ್ಷ ಜೆಪಿ ನಡ್ಡಾರನ್ನ ಮೀಟ್‌ ಮಾಡಿದ್ದಾರೆ. ಮಂಡ್ಯ ಕ್ಷೇತ್ರ ಈ ಬಾರಿ JDSಗೆ ಹೋಗಬೋದು ಅನ್ನೋ ಸುದ್ದಿ ಹರಿದಾಡ್ತಿರೋ ಹೊತ್ತಲ್ಲೇ ಈ ಬೆಳವಣಿಗೆಯಾಗಿದೆ. ಸುಮಲತಾ ಬಿಜೆಪಿ ಹೈಕಮಾಂಡ್‌ ಮೂಲಕ ಟಿಕೆಟ್‌ಗಾಗಿ ಲಾಬಿ ಮಾಡ್ತಿದ್ದಾರೆ ಅಂತೇಳಲಾಗ್ತಿದೆ.

-masthmagaa.com

Contact Us for Advertisement

Leave a Reply