masthmagaa.com:
ಭಾರತದಲ್ಲಿ ಜೀವ ಬೆದರಿಕೆಯ ಕುರಿತು ಸಲ್ಮಾನ್ ಖಾನ್ ಅವರ ಇತ್ತೀಚಿನ ಹೇಳಿಕೆಗಳಿಗೆ ಕಂಗನಾ ರಣಾವತ್ ಪ್ರತಿಕ್ರಿಯಿಸಿದ್ದಾರೆ. ಸಲ್ಮಾನ್ ಖಾನ್ ಅವರಿಗೆ ಮುಂಬೈ ಪೊಲೀಸರು ಜೀವ ಬೆದರಿಕೆಯ ಸಲುವಾಗಿ ವೈ-ಕೆಟಗರಿ ಸೆಕ್ಯೂರಿಟಿಯನ್ನ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಸಲ್ಮಾನ್ ಖಾನ್ ” ಯುಎಇಯಲ್ಲಿ ಆರಾಮಾಗಿ ಇದ್ದೀನಿ, ಆದರೆ ನನಗೆ ಇಂಡಿಯಾದಲ್ಲೇ ಸ್ವಲ್ಪ ಭಯ ಆಗತ್ತೆ” ಅಂತ ಹೇಳಿದ್ರು. ಸಲ್ಮಾನ್ ಖಾನ್ ಅವರ ಈ ಹೇಳಿಕೆಗೆ ಕಂಗನಾ ರಣಾವತ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಂದ ನೀವು ಹೈ ಸೆಕ್ಯೂರಿಟಿ ಪಡೀತಾ ಇದ್ರಿ. ನೀವು ಭಯ ಪಡುವ ಅಗತ್ಯ ಇಲ್ಲ. ಈ ರೀತಿ ಕರೆಗಳು ಬಂದಾಗ ನನಗೂ ಸಹ ಹೈ ಸೆಕ್ಯೂರಿಟಿ ಕೊಟ್ಟಿದ್ರು, ಈಗ ನಮ್ಮ ದೇಶ ಸುರಕ್ಷಿತವಾಗಿದೆ. ನೀವು ಯೋಚನೆ ಮಾಡೋದು ಬೇಡ” ಅಂತ ಹೇಳಿದ್ದಾರೆ.
-masthmagaa.com
Contact Us for Advertisement