masthmagaa.com:
ದೆಹಲಿ: 2021ರಲ್ಲಿ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ವಹಿಸೋದಿಲ್ಲ ಅಂತ ಟೀಂ ಇಂಡಿಯಾ ಮಾಜಿ ಆಟಗಾರ ಸಂಜಯ್ ಬಂಗಾರ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ನನಗೆ ಗೊತ್ತಿರೋ ಪ್ರಕಾರ 2011ರ ವಿಶ್ವಕಪ್ ಗೆದ್ದ ಬಳಿಕ ಧೋನಿ ನಾಯಕತ್ವವನ್ನು ಬಿಟ್ಟುಕೊಡಲು ನಿರ್ಧರಿಸಿದ್ರು. ಆದ್ರೆ ಆಗ ನಾಯಕತ್ವ ವಹಿಸಿಕೊಳ್ಳಲು ಯಾರೂ ರೆಡಿ ಇರಲಿಲ್ಲ.. ನಂತರದಲ್ಲಿ ಸರಿಯಾದ ಸಮಯ ನೋಡಿಕೊಂಡು ಧೋನಿ ತಮ್ಮ ನಾಯಕತ್ವವನ್ನು ವಿರಾಟ್ ಕೊಹ್ಲಿಗೆ ವಹಿಸಿದ್ರು. ಬಳಿಕ ತಾವು ಕೂಡ ತಂಡದ ಸದಸ್ಯನಾಗಿ ಆಟವಾಡಿದ್ರು. ಈಗಲೂ ಅಷ್ಟೆ.. ಮುಂದಿನ ಐಪಿಎಲ್ನಲ್ಲಿ ಧೋನಿ ನಾಯಕತ್ವ ವಹಿಸಿಕೊಳ್ಳೋದಿಲ್ಲ.. ಬದಲಿಗೆ ಸೌತ್ ಆಫ್ರಿಕಾದ ಆಟಗಾರ ಫಾಫ್ ಡು ಪ್ಲೆಸಿಸ್ ಅವರಿಗೆ ನಾಯಕತ್ವವನ್ನು ವಹಿಸಿ, ತಂಡದ ಸದಸ್ಯನಾಗಿ ಆಟವಾಡಲಿದ್ದಾರೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement