masthmagaa.com:
ಆರ್ಯನ್ ಖಾನ್ರನ್ನು ಅರೆಸ್ಟ್ ಮಾಡಿದ ದಿನದಿಂದಲೂ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಮಹಾರಾಷ್ಟ್ರ ಸಚಿವ, ಎನ್ಸಿಪಿ ನಾಯಕ ನವಾಬ್ ಮಲ್ಲಿಕ್ ದಾಳಿ ನಡೆಸುತ್ತಲೇ ಇದ್ದಾರೆ. ಇಷ್ಟು ದಿನ ಸಮೀರ್ ವಾಂಖೆಡೆ ಕೆಲಸ ಪಡೆಯುವಾಗ ಮೋಸ ಮಾಡಿದ್ದಾರೆ. ಫೋನ್ ಟ್ಯಾಪಿಂಗ್ ಮಾಡ್ತಾರೆ ಅಂತ ಆರೋಪಿಸ್ತಿದ್ದ ನವಾಬ್ ಮಲ್ಲಿಕ್ ಇವತ್ತು ಸಮೀರ್ ವಾಂಖೆಡೆ ಮದುವೆ ಫೋಟೋ ಶೇರ್ ಮಾಡಿದ್ದಾರೆ. ಜೊತೆಗೆ ಇದು ಸ್ವೀಟ್ ಕಪಲ್ ಫೋಟೋ.. ಸಮೀರ್ ವಾಂಖೆಡೆ ಮತ್ತು ಶಬಾನಾ ಖುರೇಷಿ ನಿಖಾ ಶಾಸ್ತ್ರದ ಫೋಟೋ ಅಂತ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರೋ ಸಮೀರ್ ವಾಂಖೆಡೆ, ನಾನು ಹುಟ್ಟಿನಿಂದಲೂ ಹಿಂದು. ದಲಿತ ಕುಟುಂಬದವನು. ನಾನು ಇವತ್ತು ಕೂಡ ಹಿಂದೂನೇ.. ನಾನು ಯಾವತ್ತೂ ಬೇರೆ ಧರ್ಮಕ್ಕೆ ಮತಾಂತರ ಆಗಿಲ್ಲ. ಭಾರತ ಜಾತ್ಯಾತೀತ ದೇಶ.. ಆ ಬಗ್ಗೆ ನನಗೆ ಹೆಮ್ಮೆ ಇದೆ. ನಾನು ಹಿಂದು, ನನ್ನ ತಾಯಿ ಮುಸ್ಲಿಂ. ತಾಯಿಯ ಆಸೆಯಂತೆ ನಾನು ಮುಸ್ಲಿಂ ಸಂಪ್ರದಾಯದಲ್ಲಿ ಮದ್ವೆಯಾಗಿದ್ದೆ ಅಷ್ಟೆ. ನಂತರ ಇಬ್ಬರೂ ಡಿವೋರ್ಸ್ ಮಾಡ್ಕೊಂಡ್ವಿ. ನಾನು ಮತಾಂತರ ಆಗಿದ್ದರ ಬಗ್ಗೆ ದಾಖಲೆ ಇದ್ರೆ ಸಚಿವ ನವಾಬ್ ಮಲ್ಲಿಕ್ ಅದನ್ನ ನೀಡಲಿ ನೋಡೋಣ ಅಂತ ಹೇಳಿದ್ದಾರೆ. ಸಮೀರ್ ವಾಂಖೆಡೆ ಕ್ರಾಂತಿ ವಾಂಖೆಡೆ ಕೂಡ ಪತಿಯ ಬೆಂಬಲಕ್ಕೆ ನಿಂತಿದ್ದಾರೆ.
ಆದ್ರೆ ಸಚಿವ ನವಾಬ್ ಮಲ್ಲಿಕ್ ಮೊದಲಿಂದಲೂ ಸಮೀರ್ ವಾಂಖೆಡೆ ನಕಲಿ ದಾಖಲೆ ಕೊಟ್ಟು ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಇದು ಸುಳ್ಳಾದ್ರೆ ನಾನು ರಾಜಕೀಯಕ್ಕೆ ಗುಡ್ಬೈ ಹೇಳ್ತೀನಿ ಅಂತ ಕೂಡ ಸವಾಲು ಹಾಕಿದ್ದಾರೆ.
ಇವೆಲ್ಲದ್ರ ನಡುವೆ ಸಮೀರ್ ವಾಂಖೆಡೆ ಮೊದಲ ಮದುವೆ ಶಾಸ್ತ್ರ ನೆರವೇರಿಸಿದ ಮೌಲಾನಾ ಪ್ರತಿಕ್ರಿಯಿಸಿದ್ದಾರೆ. 2006ರಲ್ಲಿ ಸಮೀರ್ ತಾನು ಮುಸ್ಲಿಂ ಅಂತಲೇ ಹೇಳಿಕೊಂಡಿದ್ದ. ಆತನ ತಂದೆ ಹೆಸರು ದಾವೂದ್. ಈಗ ಆತ ನಾನ್ ಮುಸ್ಲಿಂ ಅಲ್ಲ ಅಂತ ಹೇಳಿದ್ರೆ ಅದು ಸುಳ್ಳು ಅಂತ ಹೇಳಿದ್ದಾರೆ.
ನವಾಬ್ ಮಲ್ಲಿಕ್ ಆರೋಪಗಳಿಗೆ ಪ್ರತಿಕ್ರಿಯಿಸಿರೋ ಸಮೀರ್ ವಾಂಖೆಡೆ ತಂದೆ ಧ್ಯಾನ್ದೇವ್ ವಾಂಖೆಡೆ, ನವಾಬ್ ಮಲ್ಲಿಕ್ ರಾವಣ ಇದ್ದಂಗೆ.. ಅವರಿಗೆ 10 ತಲೆ, 10 ಬಾಯಿ, ದುಡ್ಡು ಎಲ್ಲಾ ಇದೆ. ಅವರು ಬೇಕಾದ್ದನ್ನ ಮಾಡ್ಬೋದು. ನಮಗೆ ಜೀವ ಬೆದರಿಕೆ ಇದೆ ಅಂತ ಹೇಳಿದ್ದಾರೆ. ಜೊತೆಗೆ ನಾನೊಬ್ಬ ದಲಿತ.. ನಾನು ಮುಸ್ಲಿಂ ಆಗಲು ಹೇಗೆ ಸಾಧ್ಯ..? ನನ್ನ ಪತ್ನಿ ಮುಸ್ಲಿಮಳಾಗಿದ್ದಳು ಅಷ್ಟೆ ಅಂತ ಹೇಳಿದ್ದಾರೆ.
ಸಮೀರ್ ವಾಂಖೆಡೆ ವಿರುದ್ಧದ ಆರೋಪಗಳ ತನಿಖೆಗಾಗಿ ಮುಂಬೈ ಪೊಲೀಸರು ಎಸಿಪಿ ದರ್ಜೆಯ ತನಿಖಾಧಿಕಾರಿಯನ್ನು ನೇಮಿಸಲಾಗಿದೆ. ಈವರೆಗೆ ದಾಖಲಾಗಿರೋ ಎಲ್ಲಾ 4 ಕೇಸ್ಗಳ ತನಿಖೆಯನ್ನ ಇವರು ನಡೆಸಲಿದ್ದಾರೆ.
ಇನ್ನು ತನ್ನ ವಿರುದ್ಧದ ಆರೋಪಗಳ ತನಿಖೆಗೆ ರಚನೆಯಾಗಿರೋ ಎನ್ಸಿಬಿ ಸಮಿತಿ ಮುಂದೆ ಸಮೀರ್ ವಾಂಖೆಡೆ ವಿಚಾರಣೆಗೆ ಹಾಜರಾಗಿದ್ರು.
-masthmagaa.com
Contact Us for Advertisement