masthmagaa.com:

‘ಬಿಹಾರದಲ್ಲಿ ಎಲ್​ಜೆಪಿ (ಲೋಕ ಜನಶಕ್ತಿ ಪಾರ್ಟಿ) ಅಧಿಕಾರಕ್ಕೆ ಬಂದರೆ ನಿತೀಶ್​ ಕುಮಾರ್ ಕಂಬಿ ಹಿಂದೆ ಹೋಗ್ತಾರೆ’ ಅಂತ ಎಲ್​ಜೆಪಿ ನಾಯಕ ಚಿರಾಗ್ ಪಾಸ್ವಾನ್ ಹೇಳಿದ್ದಾರೆ. ಬಿಹಾರ ವಿಧಾನಸಭೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಚಿರಾಗ್​ ಪಾಸ್ವಾನ್ ಈ ರೀತಿ ಹೇಳಿರೋದು ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಬಹುಕೋಟಿ ಮೇವು ಹಗರಣದಲ್ಲಿ ಸಿಕ್ಕಾಕ್ಕೊಂಡಿರುವ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್​ ಯಾದವ್ ಈಗಾಗಲೇ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಚಿರಾಗ್ ಪಾಸ್ವಾನ್, ‘ಎಲ್​ಜೆಪಿ ಅಧಿಕಾರಕ್ಕೆ ಬಂದರೆ ನಿಶ್ಚಯ್​ ಯೋಜನೆಯಲ್ಲಿ ನಡೆದ ಭ್ರಷ್ಟಾಚಾರ ಬಗ್ಗೆ ತನಿಖೆ ನಡೆಸುತ್ತೇವೆ. ಇದರಲ್ಲಿ ಸಿಎಂ ಆಗಲೀ ಅಥವಾ ಯಾರಾದ್ರೂ ಅಧಿಕಾರಿಯಾಗಲೀ ಸಿಕ್ಕಿಬಿದ್ದರೆ ಅವರನ್ನು ಜೈಲಿಗೆ ಅಟ್ಟುತ್ತೇವೆ. ಬಿಹಾರದಲ್ಲಿ ಮದ್ಯ ಮಾರಾಟ ನಿಷೇಧ ವಿಫಲವಾಗಿದೆ. ಅಕ್ರಮ ಮದ್ಯ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಇದರಿಂದ ನಿತೀಶ್ ಕುಮಾರ್​ಗೆ ಕಿಕ್​ಬ್ಯಾಕ್​ ಸಿಗುತ್ತಿದೆ. ಹೀಗಾಗಿ ಈ ಬಾರಿ ನಿತೀಶ್​ಯೇತರ ಸರ್ಕಾರ ಅಧಿಕಾರಕ್ಕೆ ಬರಲು ಬಿಜೆಪಿ ಬೆಂಬಲಿಗರು ಎಲ್​ಜೆಪಿಗೆ ವೋಟ್ ಹಾಕಿ ಅಂತ ಕೇಳಿಕೊಂಡರು.

-masthmagaa.com

Contact Us for Advertisement

Leave a Reply