ನಿಮಗೆ ತಾಕತ್ತಿದ್ರೆ ತಡೀರಿ.. ಸರ್ಕಾರಕ್ಕೆ ಡಿಕೆಶಿ ಸವಾಲ್!

masthmagaa.com:

ಪಾದಯಾತ್ರೆಗೂ ಮುನ್ನ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು. ಅವತ್ತು ಬ್ರಿಟಿಷರ ವಿರುದ್ಧ ಮೇಕೆದಾಟುಗಾಗಿ ಹೋರಾಟ ನಡೆದಿತ್ತು. ಇವತ್ತು ಬಿಜೆಪಿ, ಜೆಡಿಎಸ್ ವಿರುದ್ಧ ಹೋರಾಟ ನಡೀತಾ ಇದೆ. ಇಲ್ಲಿರೋ ಎಲ್ಲರ ವಿಡಿಯೋ, ಅಡ್ರೆಸ್ ಕಳುಹಿಸಿಕೊಡ್ತೀನಿ. ಎಸ್​​ಪಿಗಳೇ, ಗೃಹಸಚಿವರೇ ನಿಮಗೆ ತಾಕತ್ ಇದ್ರೆ ಕ್ರಮ ತಗೊಳ್ಳಿ ಅಂತ ಸವಾಲ್ ಎಸೆದ್ರು.. ಯಾಕಂದ್ರೆ ನಿಮ್ಮ ನಿರ್ಬಂಧವೇ ಅನ್ಯಾಯ.. ಸಂವಿಧಾನಕ್ಕೆ ವಿರುದ್ಧವಾಗಿದ್ದಾಗಿದೆ. ಹೀಗಾಗಿ ಅದಕ್ಕೆಲ್ಲಾ ಹೆದರೋ ಮಕ್ಕಳು ನಾವಲ್ಲ ಅಂತ ಹೇಳಿದ್ದಾರೆ. ಜೊತೆಗೆ ಪ್ರತಿಭಟನೆಯಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದ ತಿಳಿಸಿದ ಅವರು, ಕೊರೋನಾ ರೂಲ್ಸ್ ಪಾಲಿಸುವಂತೆಯೂ ಮನವಿ ಮಾಡಿದ್ರು.

ಸಿದ್ದರಾಮಯ್ಯ ಮಾತನಾಡಿ, ಭಂಡರಿಗೆ ಏನೂ ಹೇಳಕ್ಕಾಗಲ್ಲ.. ಈ ಪಾದಯಾತ್ರೆ 19ನೇ ತಾರೀಕಿನವರೆಗೂ ಸಾಗೇ ಸಾಗುತ್ತೆ. ಇದು ರಾಜಕೀಯ ಪಾದಯಾತ್ರೆಯಲ್ಲ.. ಬೆಂಗಳೂರು ಜನತೆಗೆ ನೀರು ನೀಡಲು, 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಮಾಡ್ತಿರೋ ಯೋಜನೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply