masthmagaa.com:
ಚತ್ತೀಸ್ಗಢದ ಸಿಎಂ ಭುಪೇಶ್ ಸಿಂಗ್ ಭಗೇಲ್ ತಂದೆ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬ್ರಾಹ್ಮಣರನ್ನು ಬಹಿಷ್ಕರಿಸುವ ಬಗ್ಗೆ ನೀಡಿದ ಹೇಳಿಕೆ ಸಂಬಂಧ ಪೊಲೀಸರು ಈ ಕೇಸ್ ಹಾಕಿದ್ದಾರೆ. ಉತ್ತರ ಪ್ರದೇಶದಲ್ಲಿ ಮಾತನಾಡಿದ್ದ ನಂದ ಕುಮಾರ್ ಭಗೇಲ್, ಈ ದೇಶದ ಗ್ರಾಮಸ್ಥರು ತಮ್ಮ ಗ್ರಾಮದೊಳಗೆ ಬ್ರಾಹ್ಮಣರನ್ನು ಬರೋಕೆ ಬಿಡಬಾರದು. ಈ ಸಂಬಂಧ ನಾನು ಎಲ್ಲಾ ಸಮುದಾಯದ ಜೊತೆಗೆ ಮಾತುಕತೆ ನಡೆಸುತ್ತೇನೆ. ಬ್ರಾಹ್ಮಣರೆಲ್ಲರನ್ನು ವೋಲ್ಗಾ ನದಿ ತೀರಕ್ಕೆ ಕಳುಹಿಸಬೇಕು ಅಂತ ಹೇಳಿದ್ರು. ತಮ್ಮ ತಂದೆ ವಿರುದ್ಧ ಎಫ್ಐಆರ್ ಬಗ್ಗೆ ಪ್ರತಿಕ್ರಿಯಿಸಿರೊ ಸಿಎಂ ಭುಪೇಶ್ ಸಿಂಗ್ ಭಗೇಲ್, ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ನನ್ನ ತಂದೆ ಕೋಮುಸೌಹಾರ್ಧ ಹಾಳು ಮಾಡೋಕೆ ಯತ್ನಿಸಿದ್ದು, ಅವರ ಹೇಳಿಕೆಯಿಂದ ನನಗೇ ಬೇಜಾರಾಗಿದೆ. ನಾನು ಕಾನೂನು ಪರವಾಗಿ ನಿಲ್ತೀನಿ ಅಂತ ಹೇಳಿದ್ದಾರೆ.
-masthmagaa.com
Contact Us for Advertisement