masthmagaa.com:
ಶಸ್ತ್ರ ಚಿಕಿತ್ಸೆಯ ನಂತರ ತನ್ನ ನನ್ನ ಸಿನಿಮಾ ಕೆರಿಯರ್ ಮುಗಿದುಹೋಯ್ತು ಅಂದ್ಕೊಂಡಿದ್ದೆ ಅಂತ ಪ್ರಿಯಾಂಕ ಚೋಪ್ರಾ ಹೇಳಿದ್ದಾರೆ. ತಮ್ಮ ವೃತ್ತಿಜೀವನದ ಶುರುವಿನಲ್ಲಿ ನಡೆದ ಘಟನೆಯ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ.
ಹೊವಾರ್ಡ್ ಸ್ಟರ್ನ್ ಶೋನಲ್ಲಿ ಭಾಗವಹಿಸಿದ್ದ ಪ್ರಿಯಾಂಕ ತನ್ನ ಮೂಗಿನ ಶಸ್ತ್ರ ಚಿಕಿತ್ಸೆ ನಂತರ ಡಿಪ್ರೆಷನ್ನಿಂದ ಹೊರ ಬಂದ ಸ್ಟೋರಿಯನ್ನ ಹೇಳಿದ್ದಾರೆ. “ನನ್ನ ಇಡೀ ಜೀವನದಲ್ಲಿ ಇದೊಂದು ಕರಾಳ ಸಮಯ ಅಂತ ಹೇಳಬಹುದು. ಮೂಗಿನ ಶಸ್ತ್ರ ಚಿಕಿತ್ಸೆ ಆದಮೇಲೆ ನನ್ನ ಮುಖ ತುಂಬಾನೇ ಚೇಂಜ್ ಆಗಿ ಹೋಗಿತ್ತು. ಇದರಿಂದ ನನಗೆ 3 ಸಿನಿಮಾದ ಆಫರ್ ಕೈ ತಪ್ಪಿ ಹೋಗಿತ್ತು.” ಅಂತ ಹೇಳಿದ್ದಾರೆ.
“ಈ ಚಿಕಿತ್ಸೆಗೆ ನನಗೆ ಧೈರ್ಯ ತುಂಬಿದ್ದು ನನ್ನ ತಂದೆ. ಶುರುವಿನಲ್ಲಿ ನಾನು ತುಂಬಾನೇ ಹೆದರಿದ್ದೆ. ನಾನು ಕೂಡ ನಿನ್ನ ಜೊತೆ ಆಪರೇಷನ್ ಥೇಟರ್ನಲ್ಲಿ ಇರ್ತೀನಿ ಅಂತ ಧೈರ್ಯ ತುಂಬಿ, ನನ್ನ ಜೊತೆ ಆಪರೇಷನ್ ಥೇಟರ್ನಲ್ಲಿ ಇದ್ದು, ನನ್ನ ಕೈ ಹಿಡಿದುಕೊಂಡು ನನಗೆ ಧೈರ್ಯ ತುಂಬ್ತಾ ಇದ್ರು.” ಅಂತ ಪ್ರಿಯಾಂಕ ತನ್ನ ತಂದೆಯ ಬಗ್ಗೆಯೂ ಕೂಡ ಹೇಳಿದ್ದಾರೆ.
“ಇಷ್ಟೆಲ್ಲಾ ಇದ್ರೂ ಕೂಡ ನನಗೆ ಸಿನಿಮಾದಲ್ಲಿ ನಟಿಸಲು ಅನಿಲ್ ಶರ್ಮಾ ಅವಕಾಶ ಮಾಡಿಕೊಟ್ಟಿದ್ರು, ಸಿನಿಮಾದಲ್ಲಿ ನಾನು ನಾಯಕಿಯಾಗಿ ನಟಿಸಬೇಕಿತ್ತು.ಆದ್ರೆ ಪೋಷಕ ಪಾತ್ರವನ್ನ ಕೊಟ್ಟಿದ್ರು, ಆದ್ರೂ ಕೂಡ ನಾನು ಅಚ್ಚುಕಟ್ಟಾಗಿ ನಿಬಾಯಿಸಿದ್ದೆ. ಅನಿಲ್ ಶರ್ಮಾ ತುಂಬಾ ಒಳ್ಳೆಯವರು” ಅಂತ ಹೇಳಿದ್ದಾರೆ.
-masthmagaa.com
Contact Us for Advertisement